ಪ್ರಧಾನಿ ಮೋದಿ, ಕೆಸಿಆರ್, ಓವೈಸಿ ಎಲ್ಲರೂ ಒಂದೇ: ರಾಹುಲ್ ಗಾಂಧಿ
ಹೈದರಾಬಾದ್, ಡಿಸೆಂಬರ್ 03: "ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಎಲ್ಲರೂ ಒಂದೇ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
'ಕಮಿಷನ್' ಎಂದ ರಾಹುಲ್ ಗಾಂಧಿಗೆ ಕೆಸಿಆರ್ ಖಡಕ್ ಪ್ರತಿಕ್ರಿಯೆ
ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಅವರು ಮೂರು ಜನರೂ ಒಂದೇ. ದಯವಿಟ್ಟು ಅವರನ್ನು ನಂಬಿ ಮೂರ್ಖರಾಗಬೇಡಿ" ಎಂದು ತೆಲಂಗಾಣದ ಜನರಲ್ಲಿ ಮನವಿ ಮಾಡಿಕೊಂಡರು.
ನಾನು ಯೋಧ, ಭಿಕ್ಷುಕನಲ್ಲ: ಬಿಜೆಪಿ, ಕಾಂಗ್ರೆಸ್ಸಿಗೆ ಕೆಸಿಆರ್ ತಪರಾಕಿ!
TRS is the BJP's "B" team & KCR operates as Mr Modi's, Telangana Rubber Stamp.
— Rahul Gandhi (@RahulGandhi) December 3, 2018
Owaisi's, AIMIM is the BJP's "C" team, whose role is to split the anti BJP/ KCR vote.
Great people of Telangana, Modi, KCR & Owaisi are one. They speak in twisted tongues. Do not be fooled by them! pic.twitter.com/yIt6vlC6Wh
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಬಿಜೆಪಿ 'ಬಿ' ಟೀಮ್ ಇದ್ದಂತೆ. ಕೆ.ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿ ಅವರ 'ತೆಲಂಗಾಣ ರಬ್ಬರ್ ಸ್ಟಾಂಪ್' ಎಂದು ಟಿ ಆರ್ ಎಸ್ ಅನ್ನು ವ್ಯಾಖ್ಯಾನಿಸಿದರು!
'ಮೋದಿ, ಕೆಸಿಆರ್ ಮತ್ತು ಓವೈಸಿ ಮೂವರೂ ಒಂದೇ. ಅವರು ಮೂರು ಜನರೂ ಸೀಳಿದ ನಾಲಿಗೆಯಲ್ಲೇ ಮಾತನಾಡುತ್ತಾರೆ. ಅವರಿಂದ ಮೂರ್ಖರಾಗಬೇಡಿ' ಎಂದು ಟ್ವೀಟ್ ಮೂಲಕ ಅವರು ಮನವಿ ಮಾಡಿದರು.