ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಸಂಘರ್ಷದ ಸಂದರ್ಭದಲ್ಲಿ ಕೇಂದ್ರದ ಉನ್ನತ ನಾಯಕತ್ವ ನಾಪತ್ತೆ:ಓವೈಸಿ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 11: ಭಾರತ-ಚೀನಾ ಸಂಘರ್ಷದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಉನ್ನತ ನಾಯಕತ್ವ ನಾಪತ್ತೆಯಾಗಿದೆ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ನಮ್ಮ ಯೋಧರು ಚೀನಾದ ಪಿಎಲ್ಎ ಯೋಧರನ್ನು ಗಡಿಯಲ್ಲಿ ಧೈರ್ಯದಿಂದ ನಿಯಂತ್ರಿಸಿದ್ದಾರೆ. ಸೇನೆ ಪಾಲಿಗೆ ಇದು ಸುದೀರ್ಘ ಸಮಸ್ಯೆಯೇ ಅಲ್ಲ. ಆದರೆ ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರ್ಕಾರದ ಹಿರಿಯ ನಾಯಕತ್ವ ನಾಪತ್ತೆಯಾಗಿದ್ದು, ಈ ಸಂಬಂಧ ದೃಢನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಎಲ್ಲಿ ಶೂಟ್ ಮಾಡ್ತೀರ ಹೇಳಿ ಅಲ್ಲಿಗೆ ಬರ್ತೀನಿ: ಅಸಾದುದ್ದೀನ್ ಓವೈಸಿ ಎಲ್ಲಿ ಶೂಟ್ ಮಾಡ್ತೀರ ಹೇಳಿ ಅಲ್ಲಿಗೆ ಬರ್ತೀನಿ: ಅಸಾದುದ್ದೀನ್ ಓವೈಸಿ

ಭಾರತೀಯ ಸೇನೆ ಇತ್ತೀಚೆಗೆ ಲಡಾಖ್ ನಲ್ಲಿ ಚೀನಾದ ಪಿಎಲ್ಎ ಯೋಧರು ಎಲ್ಎಸಿ ಅತಿಕ್ರಮಣವನ್ನು ವಿಫಲಗೊಳಿಸಿ, ಪ್ಯಾಂಗಾಂಗ್ ಸರೋವರದ ಪ್ರಮುಖ ಶಿಖರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಇದರಿಂದ ಚೀನಾ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು.

Owaisi Top Leadership Missing From Action In China Conflict

ಇದೇ ಕಾರಣಕ್ಕೆ ಚೀನಾ ಮತ್ತು ಭಾರತದ ನಡುವೆ ಶೀಥಲ ಸಮರವೇರ್ಪಟ್ಟಿದೆ. ಲಡಾಖ್ ಸಂಘರ್ಷ ನಡೆದು ವಾರಗಳೇ ಕಳೆದರೂ ಈ ವರೆಗೂ ಪ್ರಧಾನಿ ಮೋದಿ ಒಂದೇ ಒಂದು ಪದವನ್ನೂ ಹೇಳಿಲ್ಲ.

ಬಹುಶಃ, ಪ್ರಧಾನಿ ಮೋದಿ ನವಿಲುಗಳಿಗೆ ಆಹಾರ ನೀಡುವುದರಿಂದ ಮುಕ್ತರಾದಾಗ, ಈ ದೇಶದ ಜನರಿಗೆ ಹೇಳಲು ಅವರಿಗೆ ಸಮಯವಿರುತ್ತದೆ. ಚೀನಾ ದೇಶವನ್ನು ಹೆಸರಿನಿಂದ ಉಲ್ಲೇಖಿಸುವ ಧೈರ್ಯ ಬರುತ್ತದೆ ಎಂದು ಹೇಳಿದ್ದಾರೆ.

English summary
Our armed forces are doing their best to tackle the People's Liberation Army (PLA) at the border, but the crisis is no longer about the military but about the top leadership which is missing from action, said AIMIM leader Asaduddin Owaisi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X