ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ: ಅತ್ಯಾಚಾರ ಸಂತ್ರಸ್ತೆ ತಂದೆ
ಹೈದರಾಬಾದ್, ಡಿಸೆಂಬರ್ 06: ತೆಲಂಗಾಣ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಜೀವತ್ತ ಸುಟ್ಟಿದ್ದ ಕಾಮುಕರನ್ನು ಕೃತ್ಯ ಎಸಗಿದ ಸ್ಥಳದಲ್ಲಿಯೇ ಎನ್ಕೌಂಟರ್ ಮಾಡಲಾಗಿದೆ.
ಅತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ ನಲ್ಲಿ ಹೊಡೆದು ಉರುಳಿಸಿರುವ ಬಗ್ಗೆ ಅತ್ಯಾಚಾರ ಸಂತ್ರಸ್ತೆ ದಿಶಾ (ಹೆಸರು ಬದಲಿಸಲಾಗಿದೆ) ತಂದೆ ಮಾತನಾಡಿದ್ದು, 'ಮಗಳ ಆತ್ಮಕ್ಕೆ ಈಗ ನ್ಯಾಯ ಸಿಕ್ಕಿದೆ' ಎಂದು ಹೇಳಿದ್ದಾರೆ.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್ ಕೌಂಟರ್
'ನನ್ನ ಮಗಳು ಸಾವನ್ನಪ್ಪಿ ಹತ್ತು ದಿನವಾಯ್ತು ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ದೊರಕಿದೆ. ನಾನು ಪೊಲೀಸ್ ಇಲಾಖೆಗೆ ಹಾಗೂ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಹೇಳಿದರು.
ದೆಹಲಿಯ ನಿರ್ಭಯಾ ತಾಯಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಒಬ್ಬ ಸಂತ್ರಸ್ತೆಗಾದರೂ ನ್ಯಾಯ ದೊರಕಿದೆ' ಎಂದು ಹೇಳಿದ್ದಾರೆ.
ಪಶುವೈದ್ಯೆ ಕೊಂದವರನ್ನು ಎನ್ ಕೌಂಟರ್ ಮಾಡಿದ್ದು ಕನ್ನಡಿಗ
ಇಂದು ಬೆಳಿಗ್ಗೆ ಚತ್ತನಪಲ್ಲಿ ಬಳಿ ನಾಲ್ವರು ಆರೋಪಿಗಳಾದ ನವೀನ್, ಮೊಹಮ್ಮದ್ ಆರೀಫ್, ಚೆನ್ನಕೇಶವುಲು, ಶಿವಾ ಅವರನ್ನು ಎನ್ಕೌಂಟರ್ ನಲ್ಲಿ ಕೊಲ್ಲಲಾಗಿದೆ. ಆರೋಪಿಗಳನ್ನು ಸ್ಥಳ ಮಹಜರ್ ಮಾಡಲು ಕರೆದುಕೊಂಡು ಹೋಗಲಾಗಿತ್ತು. ಆ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಿ ಪರಾರಿ ಆಗಲು ಯತ್ನಿಸಿದರು ಹಾಗಾಗಿ ಅವರನ್ನು ಗುಂಡು ಹೊಡೆದು ಕೊಲ್ಲಲಾಗಿದೆ.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?
ನವೆಂಬರ್ 27 ರಂದು ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆ ಬದುಕಿರುವಾಗಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲಾಗಿತ್ತು.