'ಕೌರವರು-ದೇಶದ ಮೊದಲ ಟೆಸ್ಟ್ ಟ್ಯೂಬ್ ಬೇಬಿಗಳು'
ಹೈದರಾಬಾದ್, ಜನವರಿ 06: ಜಲಂಧರ್ ನಲ್ಲಿ ಭಾರತೀಯ ಸೈನ್ಸ್ ಕಾಂಗ್ರೆಸ್ ನಲ್ಲಿ ಮಹಾಭಾರತ, ರಾಮಾಯಣದ್ದೇ ಸುದ್ದಿ. ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಉಪ ಕುಲಪತಿ ಜಿ ನಾಗೇಶ್ವರ್ ರಾವ್ ಅವರು ಮಾತನಾಡಿ, ಭಾರತೀಯರಿಗೆ ಅಧುನಿಕ ವಿಜ್ಞಾನದ ಬಗ್ಗೆ ಶತಮಾನಗಳ ಹಿಂದೆಯೇ ಅರಿವಿತ್ತು ಎಂದಿದ್ದಾರೆ.
ಒಬ್ಬ ತಾಯಿಯಿಂದ ನೂರು ಜನ ಕೌರವರು ಜನಿಸಿದ್ದು ಸ್ಟೆಲ್ ಸೆಲ್ ತಂತ್ರಜ್ಞಾನದ ಮೂಲಕ. ಕೌರವರು ಮೊಟ್ಟ ಮೊದಲ ಟೆಸ್ಟ್ ಟ್ಯೂಬ್ ಬೇಬಿಗಳು, ದೇಶದ ವಿಜ್ಞಾನದ ಮಟ್ಟ ಆ ರೀತಿ ಇತ್ತು. ನೂರು ಮಣ್ಣಿನ ಮಡಿಕೆಯಲ್ಲಿ ನೂರು ತತ್ತಿಗಳನ್ನು ಫಲ ನೀಡುವಂತೆ ಮಾಡಿದ್ದು ಆಗಿನ ಸಾಧನೆ
ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?
ಕ್ಷಿಪಣಿ ತಂತ್ರಜ್ಞಾನ ಕೂಡಾ ನಮ್ಮವರಿಗೆ ರಾಮಾಯಣ ಕಾಲದಲ್ಲೇ ಅರಿವಿತ್ತು. ವೈರಿಯನ್ನು ಬಡಿದು ವಾಪಸ್ ಬರುವ ಅಸ್ತ್ರಗಳನ್ನು ರಾಮ ಪ್ರಯೋಗಿಸಿದ್ದನ್ನು ನೀವು ಗಮನಿಸಬಹುದು.
#WATCH: GN Rao,Vice-Chancellor Andhra University at Indian Science Congress y'day in Jalandhar:How come Gandhari gave birth to 100 children?Stem cell research was done 1000 yrs ago in this country,we had 100 Kauravas from one mother because of stem cell&test tube-baby technology. pic.twitter.com/C9nlaYwB7p
— ANI (@ANI) January 5, 2019
ರಾವಣ ಸುಮಾರು 24 ಬಗೆಯ ವಿಮಾನ ಆಕೃತಿಯನ್ನು ನಿರ್ಮಿಸಿದ್ದರು. ಶ್ರೀಲಂಕಾದಲ್ಲಿ ವಿಮಾನ ನಿಲ್ದಾಣಗಳ ಕುರುಹುಗಳು ಸಿಕ್ಕಿವೆ ಎಂದು ಹೇಳಿದರು.