ಭಾರತಕ್ಕೆ ಪ್ರಾಮಾಣಿಕ ಪ್ರಧಾನಿ ಬೇಕು, ಚೌಕಿದಾರನಲ್ಲ: ಓವೈಸಿ
ಹೈದರಾಬಾದ್, ಮಾರ್ಚ್ 21: ಬಿಜೆಪಿಯ 'ಮೈ ಬಿ ಚೌಕಿದಾರ್' ಅಭಿಯಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಏಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ, 'ಭಾರತಕ್ಕೆ ಚೌಕಿದಾರ ಬೇಡ, ಪ್ರಾಮಾಣಿಕ ಪ್ರಧಾನಿ ಬೇಕು' ಎಂದಿದ್ದಾರೆ.
"ನಿಮ್ಮ ಅಧಿಕಾರಾವಧಿಯಲ್ಲಿ ಪಠಾಣ್ ಕೋಟ್ ನಲ್ಲಿ ದಾಳಿಯಾಯಿತು, ಉರಿಯಲ್ಲಿ ದಾಳಿಯಾಯಿತು, ಪುಲ್ವಾಮಾದಲ್ಲಿ ಉಗ್ರದಾಳಿಯಾಯಿತು. ನೀವೆಂಥ ಚೌಕಿದಾರ? ಭಾರತಕ್ಕೆ ಪ್ರಾಮಾಣಿಕ ಪ್ರಧಾನಿ ಬೇಕು, ಚೌಕಿದಾರ ಅಲ್ಲ" ಎಂದು ಓವೈಸಿ ಹೇಳಿದರು.
ಇಂದು ಇಡೀ ಭಾರತ ಮೈ ಭೀ ಚೌಕಿದಾರ್ ಎನ್ನುತ್ತಿದೆ : ಮೋದಿ
ಭಾರತೀಯ ಸಂಸ್ಕೃತಿಯ ಮೂಲ ತತ್ತ್ವವನ್ನೇ ದುರ್ಬಲಗೊಳಿಸಲು ಹೊರಟ ಆರೆಸ್ಸೆಸ್ ನ ಸಿದ್ಧಾಂತವನ್ನು ಪ್ರಧಾನಿ ಅನುಸರಿಸುತ್ತಿದ್ದಾರೆ. ಅವರು ಮೊತ್ತ ಮೊದಲು ಸಂಸತ್ತಿನಲ್ಲಿ ಮಾತನಾಡಿದಾಗಲೇ ಅಂದುಕೊಂಡೆ, 25-30 ವರ್ಷಗಳಿಂದ ಆರೆಸ್ಸೆಸ್ ತರಬೇತಿ ಪಡೆದಿದ್ದು ಅವರ ಮಾತುಗಳಲ್ಲಿ ಢಾಳಾಗಿ ಕಾಣುತ್ತಿತ್ತು. ಆರೆಸ್ಸೆಸ್ ಎಂದಿಗೂ ಭಾರತದ ವಿವಿಧತೆಯಲ್ಲಿ ಏಕತೆ ಮತ್ತು ಜಾತ್ಯತೀತತೆಯ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ ಎಂದು ಓವೈಸಿ ದೂರಿದರು.