ನೆರವು ನೀಡಿದ ಸುಷ್ಮಾ ಸ್ವರಾಜ್ ಗೆ ಋಣಿ ಎಂದ ಹೈದರಾಬಾದ್ ಯುವಕ
ಹೈದರಾಬಾದ್, ಮೇ 04: "ನನ್ನನ್ನು ರಕ್ಷಿಸಿದ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಗೆ ಮತ್ತು ನೆರವು ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನಾನು ಋಣಿ" ಎಂದು ಹೈದರಾಬಾದ್ ನ ಯುವಕರೊಬ್ಬರು ಕೃತಜ್ಞತೆ ಸಲ್ಲಿಸಿದ್ದಾರೆ.
ಸುಷ್ಮಾರನ್ನು ಭೇಟಿಯಾದ ಪಾಕ್ ರಿಟರ್ನ್ಡ್ ಹಮೀದ್ ಅನ್ಸಾರಿ
ಹೈದರಾಬಾದ್ ಮೂಲದ ಹಫೀಸ್ ಮೊಹಮ್ಮದ್ ಬಹಾವುದ್ದಿನ್ ಅವರಿಗೆ ಸೌದಿ ಅರೇಬಿಯಾಕ್ಕೆ ಕುರಾನ್ ಶಿಕ್ಷಕರಾಗಿ ಕೆಲಸದ ಬಹಾವುದ್ದಿನ್ ಅವರನ್ನು ದೂರದ ಪ್ರದೇಶವೊಂದಕ್ಕೆ ಕರೆಸಿಕೊಂಡು ಕ್ಲೀನರ್ ಕೆಲಸ ನೀಡಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮಾಲೀಕ ಮನಸ್ಸು ಮಾಡಿರಲ್ಲಿಲ್ಲ. ಈ ಕುರಿತು ತನ್ನ ಕುಟುಂಬಸ್ಥರ ಮೂಲಕ ಬಹೌದ್ದಿನ್ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದ್ದರು.
ಅಪಹೃತ ಹಿಂದೂ ಬಾಲಕಿಯರನ್ನು ಕುಟುಂಬಕ್ಕೆ ಮರಳಿಸಿ: ಪಾಕ್ಗೆ ಸುಷ್ಮಾ ತಾಕೀತು
ಕೂಡಲೇ ಭಾರತೀಯ ವಿದೇಶಾಂಗ ಸಚಿವಾಲಯ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬಹಾವುದ್ದಿನ್ ಅವರನ್ನು ರಕ್ಷಿಸುವಂತೆ ಸೂಚನೆ ನೀಡಿತ್ತು. ಅಂತೆಯೇ ಬಹಾವುದ್ದಿನ್ ಅವರನ್ನು ರಕ್ಷಿಸಿ, ಹೈದರಾಬಾದ್ ವಿಮಾನಕ್ಕೆ ಟಿಕೆಟ್ ನೀಡಿ ಅವರನ್ನು ವಾಪಸ್ ಭಾರತಕ್ಕೆ ಕರೆಸಿಕೊಳ್ಳಲಾಗಿದೆ.