ಈ ಸಂಖ್ಯೆಗೆ ಕರೆ ಮಾಡಿ 20 ಸಾವಿರ ಲೀಟರ್ ಉಚಿತ ಕುಡಿಯುವ ನೀರು ಗಳಿಸಿ
ಹೈದರಾಬಾದ್, ಜನವರಿ 12: ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆ ಸಂಭ್ರಮ ಮುಗಿದು ಹೊಸ ಆಡಳಿತ ಆರಂಭವಾಗಿದೆ. ಈ ನಡುವೆ ಹೈದರಾಬಾದಿನ ಬಹುದೊಡ್ಡ ಸಮಸ್ಯೆಗೆ ಕೆ ಚಂದ್ರಶೇಖರ್ ರಾವ್ ಅವರ ಸರ್ಕಾರ ಪರಿಹಾರ ಕಂಡುಕೊಂಡಿದೆ. ಕೆಸಿಆರ್ ಪುತ್ರ ನಗರಾಭಿವೃದ್ಧಿ ಖಾತೆ ಸಚಿವ ಕೆ.ಟಿ ರಾಮರಾವ್ ಅವರು ಉಚಿತ ಕುಡಿಯುವ ನೀರು ಯೋಜನೆಗೆ ಮಂಗಳವಾರ ಚಾಲನೆ ನೀಡಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ಲೇಡಿ ಸೂಪರ್ ಸ್ಟಾರ್ -ರಾಜಕಾರಣಿ ವಿಜಯಶಾಂತಿ
ಹೈದರಾಬಾದಿಗಳ ಪಾಲಿಗೆ ವರವಾಗಿ ಈ ಯೋಜನೆ ಪರಿಣಮಿಸಲಿದೆ ಎಂದು ಕೆಟಿ ರಾಮರಾವ್ ಹೇಳಿದ್ದಾರೆ. ಹೈದರಾಬಾದ್ ನಿವಾಸಿಗಳು ಇನ್ಮುಂದೆ 20,000 ಲೀಟರ್ ತನಕದ ಕುಡಿಯುವ ನೀರಿಗೆ ಯಾವುದೇ ಬಿಲ್ ಪಾವತಿಸಬೇಕಾಗಿಲ್ಲ ಉಚಿತವಾಗಿ 20 ಸಾವಿರ ಲೀಟರ್ ಶುದ್ಧ ಕುಡಿಯುವ ನೀರು ಪಡೆದುಕೊಳ್ಳಬಹುದು.
The Govt. of Telangana has declared Free Drinking Water upto 20,000 Litres for Hyderabadis. To avail free water, water meter is required (except Basthi Households),
— HMWSSB (@HMWSSBOnline) January 11, 2021
visit https://t.co/2bNdGN62GV or call customer care at 155 313#WePromiseWeDeliver pic.twitter.com/Bg7GHDYFbq
ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಶ್ವಾಸನೆಯಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಉಚಿತವಾಗಿ ಕುಡಿಯುವ ನೀರನ್ನು ಪಡೆಯಲು ಇಷ್ಟಪಡುವ ನಿವಾಸಿಗಳು 155 313 ಸಂಖ್ಯೆಗೆ ಕರೆ ಮಾಡಬಹುದು ಅಥವಾ http://hyderabadwater.gov.in ವೆಬ್ ತಾಣದಲ್ಲಿ ಮನವಿ ಸಲ್ಲಿಸಬಹುದು ಎಂದು ಹೇಳಿದರು.
ಹೈದ್ರಾಬಾದ್ ಜಲ ಮಂಡಳಿ ಈಗಾಗಲೇ ಈ ಕುರಿತಂತೆ ಟ್ವೀಟ್ ಮಾಡಿದೆ. ವಾಟರ್ ಮೀಟರ್ ಪಡೆದುಕೊಳ್ಳಲು ನಿವಾಸಿಗಳು ಈ ಸಂಖ್ಯೆಗೆ ಕರೆ ಮಾಡಬಹುದು (ಬಸ್ತಿ ನಿವಾಸಿಗಳನ್ನು ಹೊರತುಪಡಿಸಿ) ಎಂದು ಹೇಳಲಾಗಿದೆ.
ದೆಹಲಿ ನಂತರ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಎರಡನೇ ನಗರ ಎಂದು ಹೈದಾರಾಬಾದ್ ಇದರಿಂದ ಗುರುತಿಸಿಕೊಳ್ಳಲಿದೆ. ಪ್ರತಿ ತಿಂಗಳು ಜಲ ಮಂಡಳಿಯಿಂದ ಮೀಟರ್ ರೀಡರ್, 20, 000 ಲೀಟರ್ ಕಳೆದು ಮಿಕ್ಕದ್ದಕ್ಕೆ ಬಿಲ್ ಹಾಕಲಿದ್ದಾರೆ ಎಂದು HMWSSB ಪ್ರಕಟಣೆಯಲ್ಲಿ ಹೇಳಿದೆ.