ಐಶ್ವಯಾ ರೈ ಮಗಳು ಆರಾಧ್ಯ ಭಾರತದ ಭವಿಷ್ಯದ ಪ್ರಧಾನಿ!
ಹೈದರಾಬಾದ್, ಜೂನ್ 26: ಬಾಲಿವುಡ್ ನ ಸ್ಟಾರ್ ದಂಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರ ಮುದ್ದಿನ ಮಗಳು ಆರಾಧ್ಯ ಅವರಿಗೆ ಗ್ಲಾಮರ್ ಜಗತ್ತಿಗಿಂತ ರಾಜಕೀಯ ರಂಗದ ಭವಿಷ್ಯವೇ ಉತ್ತಮವಾಗಿದೆ ಎಂದು ಇಲ್ಲಿನ ಖ್ಯಾತ ಜ್ಯೋತಿಷಿ ಡಿ. ಗ್ಯಾನೇಶ್ವರ್ ಭವಿಷ್ಯ ನುಡಿದಿದ್ದಾರೆ.
ಆರಾಧ್ಯ ಅವರು ಚಿತ್ರರಂಗದ ಬದಲು ರಾಜಕೀಯಕ್ಕೆ ಬರುತ್ತಾರೆ. ಭಾರತದ ಭವಿಷ್ಯದ ಪ್ರಧಾನ ಮಂತ್ರಿ ಎಂದು ಘೋಷಿಸಿದ್ದಾರೆ. ಆದರೆ, ಆರಾಧ್ಯ ಅವರ ಹೆಸರನ್ನು ಬದಲಾಯಿಸಿ ರೋಹಿಣಿ ಎಂದು ಕರೆಯಬೇಕು ಎಂದು ಸಲಹೆ ನೀಡಿದ್ದಾರೆ.
ಡಿ. ಗ್ಯಾನೇಶ್ವರ್ ಅವರು ಈ ಹಿಂದೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ರಾಜಕೀಯಕ್ಕೆ ಬರುತ್ತಾರೆ. ಮಧ್ಯಂತರ ಚುನಾವಣೆ ನಡೆದು, ರಜನಿಕಾಂತ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ. ಚಿರಂಜೀವಿ ರಾಜಕೀಯ ಬದುಕು ಹೇಗೆ ಬದಲಾಯಿಸಲಿದೆ ಎಂಬುದನ್ನು ಕರಾರುವಾಕ್ ಆಗಿ ಹೇಳಿದ್ದರು.
2019ರಲ್ಲಿ ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರ ತನಕ ಅಧಿಕಾರದಲ್ಲಿರಲಿದ್ದಾರೆ. 2024 ರಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆಯಲಿದೆ ಎಂದು ಭವಿಷ್ಯ ಹೇಳಿದ್ದಾರೆ.