ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ 2 ರೂಪಾಯಿಗಾಗಿ ನಡೆಯಿತು ಬರ್ಬರ ಕೊಲೆ

|
Google Oneindia Kannada News

ಹೈದರಾಬಾದ್, ನವೆಂಬರ್ 10: ಆಂಧ್ರಪ್ರದೇಶದಲ್ಲಿ ಕೇವಲ 2 ರೂಪಾಯಿಗೋಸ್ಕರ ಭೀಕರ ಕೊಲೆಯೇ ನಡೆದಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುವರ್ಣರಾಜು ಎಂಬುವವರು ಸೈಕಲ್‌ಗೆ ಗಾಳಿ ಹಾಕಿಸಿಕೊಳ್ಳಲು ಶಂಭು ಎಂಬುವವರ ಪಂಕ್ಚರ್ ಶಾಪ್‌ ಗೆ ಹೋಗಿದ್ದರು.

50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ

ಆ ಸಂದರ್ಭದಲ್ಲಿ ಸುರ್ವಣರಾಜು ಶಂಭು ಅವರಿಗೆ 2 ರೂಪಾಯಿ ಕಡಿಮೆ ನೀಡಿದ್ದರು. ಯಾಕೆ ಕಡಿಮೆ ನೀಡಿದ್ದೀಯಾ ಇನ್ನೂ ಎರಡು ರೂಪಾಯಿ ಕೊಡಬೇಕು ಎಂದು ಹೇಳಿದ್ದಕ್ಕೆ ಸಿಟ್ಟಾದ ಸುವರ್ಣರಾಜು ಶಂಭು ಮೇಲೆ ಹಲ್ಲೆ ನಡೆಸಿದ್ದ.

Horrific Murder In Andhra Pradesh For 2 Rupees

ಇದಕ್ಕೆ ಕೋಪಗೊಂಡ ಶಂಭು ಸ್ನೇಹಿತ ಸುವರ್ಣರಾಜು ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಕಾರಣ ಬಹಿರಂಗಗೊಂಡಿದೆ. ಕೇವಲ 2 ರೂಪಾಯಿಗೋಸ್ಕರ ಕೊಲೆ ನಡೆದಿದೆಯೋ ಅಥವಾ ವೈಷಮ್ಯ ಇತ್ತಾ ಎನ್ನುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

English summary
Horrific Murder In Andhra Pradesh For 2 Rupees, Crime held at Godavari district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X