ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರಪ್ರದೇಶದಲ್ಲಿ 2 ರೂಪಾಯಿಗಾಗಿ ನಡೆಯಿತು ಬರ್ಬರ ಕೊಲೆ
ಹೈದರಾಬಾದ್, ನವೆಂಬರ್ 10: ಆಂಧ್ರಪ್ರದೇಶದಲ್ಲಿ ಕೇವಲ 2 ರೂಪಾಯಿಗೋಸ್ಕರ ಭೀಕರ ಕೊಲೆಯೇ ನಡೆದಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುವರ್ಣರಾಜು ಎಂಬುವವರು ಸೈಕಲ್ಗೆ ಗಾಳಿ ಹಾಕಿಸಿಕೊಳ್ಳಲು ಶಂಭು ಎಂಬುವವರ ಪಂಕ್ಚರ್ ಶಾಪ್ ಗೆ ಹೋಗಿದ್ದರು.
50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ
ಆ ಸಂದರ್ಭದಲ್ಲಿ ಸುರ್ವಣರಾಜು ಶಂಭು ಅವರಿಗೆ 2 ರೂಪಾಯಿ ಕಡಿಮೆ ನೀಡಿದ್ದರು. ಯಾಕೆ ಕಡಿಮೆ ನೀಡಿದ್ದೀಯಾ ಇನ್ನೂ ಎರಡು ರೂಪಾಯಿ ಕೊಡಬೇಕು ಎಂದು ಹೇಳಿದ್ದಕ್ಕೆ ಸಿಟ್ಟಾದ ಸುವರ್ಣರಾಜು ಶಂಭು ಮೇಲೆ ಹಲ್ಲೆ ನಡೆಸಿದ್ದ.
ಇದಕ್ಕೆ ಕೋಪಗೊಂಡ ಶಂಭು ಸ್ನೇಹಿತ ಸುವರ್ಣರಾಜು ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಕಾರಣ ಬಹಿರಂಗಗೊಂಡಿದೆ. ಕೇವಲ 2 ರೂಪಾಯಿಗೋಸ್ಕರ ಕೊಲೆ ನಡೆದಿದೆಯೋ ಅಥವಾ ವೈಷಮ್ಯ ಇತ್ತಾ ಎನ್ನುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
Comments
English summary
Horrific Murder In Andhra Pradesh For 2 Rupees, Crime held at Godavari district.
Story first published: Sunday, November 10, 2019, 12:21 [IST]