Video: ತೆಲಂಗಾಣದ ಕೊವಿಡ್-19 ಆಸ್ಪತ್ರೆಯಲ್ಲೇ ಪ್ರವಾಹ ಪರಿಸ್ಥಿತಿ!
ಹೈದ್ರಾಬಾದ್, ಜುಲೈ.16: ಕೊರೊನಾವೈರಸ್ ಸೋಂಕಿನ ಹರಡುವಿಕೆ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವುದರಲ್ಲೇ ಸರ್ಕಾರಗಳು ಹೈರಾಣಾಗುತ್ತಿವೆ. ಇದರ ನಡುವೆ ಮಳೆ ನೀಡಿದ ಆಘಾತ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.
Recommended Video
ತೆಲಂಗಾಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಜಧಾನಿ ಹೈದ್ರಾಬಾದ್ ನಲ್ಲಿ ಇರುವ ಓಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಭಾರಿ ಅನಾಹುತವೇ ಸೃಷ್ಟಿಯಾಗಿದೆ. ಹಳೆಯ ಕಟ್ಟಡದ ಆಸ್ಪತ್ರೆಯು ಸಂಪೂರ್ಣವಾಗಿ ಸೋರಿದ್ದು, ನಿಂತ ನೀರಿನ ನಡುವೆಯೇ ರೋಗಿಗಳು ಮಲಗಿರುವ ದೃಶ್ಯ ಸಖತ್ ವೈರಲ್ ಆಗುತ್ತಿದೆ.
ಹೈದ್ರಾಬಾದಿನ ಸಂಸ್ಥೆಗೆ ಫೆವಿಪಿರಾವಿರ್ ಉತ್ಪಾದನೆಗೆ ಅನುಮತಿ
ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಎಷ್ಟರ ಮಟ್ಟಿಗಿದೆ ಎನ್ನುವುದಕ್ಕಿಂತ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ತೆಲಂಗಾಣದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಟೀಕಿಸಿದ್ದಾರೆ. ಆಸ್ಪತ್ರೆಯಲ್ಲಿ ಸೃಷ್ಟಿಯಾಗಿರುವ ಅವಾಂತರದ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
What more proof do we need !!
— Telangana Congress (@INCTelangana) July 15, 2020
There is no seriousness on the part of KCR govt in dealing with Corona Crisis !!
Imagine the plight of poor patients !!
On one hand they are fighting corona and on the other hand they have to experience extreme govt apathy !!#KCRFailedTelangana pic.twitter.com/o5FQEMiNxY
ಸಿಎಂ ಚಂದ್ರಶೇಖರ್ ರಾವ್ ಆಡಳಿತಕ್ಕೆ ಕೈಗನ್ನಡಿ:
ತೆಲಂಗಾಣದಲ್ಲಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಮತ್ತು ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸರ್ಕಾರವು ಮಾಡಿಕೊಂಡಿರುವ ಸಿದ್ಧತೆ ಹೀಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಆಡಳಿತ ವೈಖರಿಗೆ ಇದಕ್ಕಿಂತ ಮತ್ತೊಂದು ಸಾಕ್ಷ್ಯ ಬೇಕೇ ಎಂದು ತೆಲಂಗಾಣ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಟ್ವಿಟರ್ ನಲ್ಲಿ ಆಸ್ಪತ್ರೆಯಲ್ಲಿ ನಿಂತ ನೀರಿನ ನಡುವೆ ರೋಗಿಗಳು ಮಲಗಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.