ರಬ್ಬರ್ ಕಾರ್ಖಾನೆಗೆ ಬೆಂಕಿ, ನಾಲ್ವರು ಸಜೀವ ದಹನ
ಹೈದರಾಬಾದ್, ಡಿ. 26 : ಆಂಧ್ರಪ್ರದೇಶದ ರಬ್ಬರ್ ಕಾರ್ಖಾನೆಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಸಜೀವವಾಗಿ ದಹನವಾಗಿದ್ದಾರೆ. ಕಾರ್ಖಾನೆಯಲ್ಲಿ ಅಳವಡಿಸಿದ್ದ ಬಾಯ್ಲರ್ ಪೈಪ್ನಲ್ಲಿ ಲಿಕೇಜ್ ಸಂಭವಿಸಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಆಂಧ್ರಪ್ರದೇಶದ
ರಂಗಾರೆಡ್ಡಿ
ಜಿಲ್ಲೆಯ
ಗಗನ್
ಪಹಾಡ್
ಪ್ರದೇಶದಲ್ಲಿನ
ಅಕ್ಷಿತಾ
ರಬ್ಬರ್
ಕಾರ್ಖಾನೆಯಲ್ಲಿ
ಗುರುವಾರ
ಬೆಳಗ್ಗೆ
ಈ
ಅಗ್ನಿ
ದುರಂತ
ಸಂಭವಿಸಿದೆ,
ಇದರಿಂದಾಗಿ
ಕೋಣೆಯೊಂದರಲ್ಲಿ
ಮಲಗಿದ್ದ
ನಾಲ್ವರು
ಅಗ್ನಿ
ಆಕಸ್ಮಿಕದಿಂದ
ಸುಟ್ಟು
ಕರಕಲಾಗಿದ್ದಾರೆ.
ಮೃತರೆಲ್ಲರೂ
ಬಿಹಾರ
ಮೂಲದವರು
ಎಂದು
ತಿಳಿದುಬಂದಿದೆ.
ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರನ್ನು ನಂದ ಕಿಶೋರ್, ಇಶಾನ್, ನವೀನ್ ಹಾಗೂ ಗೋವಿಂದ ಚೌಧರಿ ಎಂದು ಗುರುತಿಸಲಾಗಿದೆ. ಅಗ್ನಿ ಆಕಸ್ಮಿಕ ಸುದ್ದಿ ತಿಳಿದ ತಕ್ಷಣ, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದರು, ಇದರಿಂದ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕಾರ್ಖಾನೆಯಲ್ಲಿ ಅಳವಡಿಸಿದ್ದ ಬಾಯ್ಲರ್ ಪೈಪ್ನಲ್ಲಿ ಸೋರಿಕೆ ಉಂಟಾಗಿ ಅಪಘಾತ ಸಂಭವಿಸಿದೆ.
ರಬ್ಬರ್ ಕಾರ್ಖಾನೆಯಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ, ಆದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರ್ಖಾನೆಯ ಮಾಲೀಕರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.