ಗಡ್ಡಧಾರಿಯ ಜೊತೆ ಸಿಎಎ ಕುರಿತು ಚರ್ಚೆಗೆ ಬನ್ನಿ: ಶಾಗೆ ಓವೈಸಿ ಪಂಥಾಹ್ವಾನ
ಹೈದಾರಾಬಾದ್, ಜನವರಿ 22: ಗಡ್ಡಧಾರಿಯ ಜೊತೆಗೆ ಸಿಎಎ ಕುರಿತು ಚರ್ಚೆ ನಡೆಸಿ ಎಂದು ಇಂಡಿಯಾ ಮಜ್ಲಿಸ್ ಇ ಇಟ್ಟೆಹದುಲ್ ಮುಸ್ಲಿಮೀನ್(ಎಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಮಿತ್ ಶಾಗೆ ಪಂಥಾಹ್ವಾನ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಅವರ ಜೊತೆಗೆ ಏಕೆ ಚರ್ಚಿಸಬೇಕು, ನನ್ನ ಜೊತೆ ಚರ್ಚೆ ಮಾಡಿ ಬನ್ನಿ ಎಂದು ಹೇಳಿದ್ದಾರೆ.
'ಜನರಿಂದ ಲೂಟಿ ಮಾಡಿದ ಹಣದಿಂದ ಕೆಂಪುಕೋಟೆ, ಕುತುಬ್ ಮಿನಾರ್ ನಿರ್ಮಾಣ'
ವಿರೋಧ ಪಕ್ಷಗಳು ಸಿಎಎ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಲಕ್ನೊದಲ್ಲಿ ನಿನ್ನೆ ಮಾತನಾಡುತ್ತಾ ಅಮಿತ್ ಶಾ ಆರೋಪಿಸಿದ್ದರು.
ಸಿಎಎ,ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ನನ್ನ ಜೊತೆ ಚರ್ಚೆಗೆ ಬನ್ನಿ. ನಾನು ಇಲ್ಲಿದ್ದೇನೆ.
ಅವರ ಜೊತೆ ಚರ್ಚೆ ಯಾಕೆ ಮಾಡಬೇಕು, ಗಡ್ಡದ ಮನುಷ್ಯನ ಜೊತೆ ಚರ್ಚೆ ನಡೆಸಿ, ನಾನು ಅವರ ಜೊತೆ ಕೂಡ ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿ ಬಗ್ಗೆ ಚರ್ಚೆ ಮಾಡಬಲ್ಲೆ ಎಂದರು.