ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಬಲ ಕಾಂಗ್ರೆಸ್‌ನಿಂದ ಮುಸಲ್ಮಾನರಿಗೆ ಪ್ರಯೋಜನ ಇಲ್ಲ: ಒವೈಸಿ

|
Google Oneindia Kannada News

Recommended Video

ವಯನಾಡಿನಲ್ಲಿ ರಾಹುಲ್ ಗೆದ್ದಿದ್ದು ಮುಸ್ಲಿಮರಿಂದ

ಹೈದರಾಬಾದ್, ಜೂನ್ 11: ದೇಶದಲ್ಲಿ ರಾಕೀಯವಾಗಿ ದುರ್ಬಲಗೊಂಡಿರುವ ಕಾಂಗ್ರೆಸ್‌ ಪಕ್ಷದಿಂದ ಮುಸ್ಲಿಂರಿಗೆ ಪ್ರಯೋಜನ ಇಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ರಾಜಕೀಯವಾಗಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿದೆ, ಅದಕ್ಕೆ ಮತ ನೀಡುವ ಮುನ್ನಾ ಮುಸ್ಲೀಮರು ಯೋಚನೆ ಮಾಡಬೇಕು ಎಂದು ಅಸಾದುದ್ದೀನ್ ಒವೈಸಿ ಅವರು ಹೇಳಿದರು.

ರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದಿದ್ದೇ ಮುಸ್ಲಿಮರಿಂದ: ಓವೈಸಿರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದಿದ್ದೇ ಮುಸ್ಲಿಮರಿಂದ: ಓವೈಸಿ

ನಾವು ಹಾಕುವ ಮತ ಎಲ್ಲಿ ಹೋಗುತ್ತಿದೆ? ಏನಾಗುತ್ತಿದೆ? ಎಂದು ಚಿಂತಿಸಲು ಮುಸಲ್ಮಾನರಿಗೆ ಇದು ಸಕಾಲ ಎಂದು ಒವೈಸಿ, ಕಾಂಗ್ರೆಸ್ ಈಗ ಮೊದಲಿನಂತಿಲ್ಲ ಅದು ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

Congress become weak its no use for Muslims: Asaduddin Owaisi

ಮುಸಲ್ಮಾನರು ಕಾಂಗ್ರೆಸ್ ಮತ್ತು ಇತರ ಜಾತ್ಯಾತೀತ ಪಕ್ಷಗಳನ್ನು ಬಿಡಲು ಸಿದ್ಧರಿಲ್ಲ ಆದರೆ ಆ ಪಕ್ಷಗಳು ಜನರ ಆಶಯಗಳನ್ನು ಈಡೇರಿಸಲು ಸಿದ್ಧವಿಲ್ಲ ಎಂದು ಒವೈಸಿ ಅವರು ಜಾತ್ಯಾತೀತ ಪಕ್ಷಗಳನ್ನೂ ಟೀಕಿಸಿದರು.

ಹಿಂದೂಸ್ಥಾನದ ಎಲ್ಲಾ ಮುಸ್ಲಿಮರಲ್ಲಿ 'ಉಗ್ರ'ರನ್ನು ಕಾಣುವ ಬಿಜೆಪಿ: ಓವೈಸಿಹಿಂದೂಸ್ಥಾನದ ಎಲ್ಲಾ ಮುಸ್ಲಿಮರಲ್ಲಿ 'ಉಗ್ರ'ರನ್ನು ಕಾಣುವ ಬಿಜೆಪಿ: ಓವೈಸಿ

ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮುಸ್ಮೀಮರ ಮತಗಳಿಂದ ಗೆದ್ದಿದ್ದಾರೆ. ವೈನಾಡಿನಲ್ಲಿ 40 ಪ್ರತಿಶತ ಮುಸ್ಲಿಂರಿದ್ದಾರೆ. ಹಾಗಾಗಿಯೇ ಅವರು ಅಲ್ಲಿ ಗೆದ್ದಿದ್ದಾರೆ ಎಂದು ಒವೈಸಿ ಹೇಳಿದ್ದಾರೆ.

English summary
Congress become politically weak in hole country, Muslims should think before voting it says AIMIM leader and MP Asadudin Owaisi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X