ಹೈದರಾಬಾದ್ ಅತ್ಯಾಚಾರ ಆರೋಪಿ ಪತ್ನಿಗೆ ಹೆಣ್ಣುಮಗು ಜನನ
ಹೈದರಾಬಾದ್, ಮಾರ್ಚ್ 7: ಹೈದರಾಬಾದಿನಲ್ಲಿ ಇತ್ತೀಚೆಗೆ ನಡೆದಿದ್ದ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಯ ಪತ್ನಿಗೆ ಹೆಣ್ಣು ಶಿಶು ಜನಿಸಿದೆ.
ಹೈದರಾಬಾದಿನಲ್ಲಿ ಪಶುವೈದ್ಯೆ ಮೇಲೆ ನಾಲ್ವರು ಲಾರಿ ಡ್ರೈವರ್ಗಳು ಅತ್ಯಾಚಾರ ನಡೆಸಿದ್ದರು. ಬಳಿಕ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದ ಚೆನ್ನಕೇಶವುಲು ಪತ್ನಿ ಈಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್ ಕೌಂಟರ್
ಆಕೆ 14 ವರ್ಷದ ಅಪ್ರಾಪ್ತೆಯಗಿದ್ದಾಳೆ. ಡಿಸೆಂಬರ್ 6 ರಂದು ಎನ್ಕೌಂಟರ್ ನಡೆದಿದ್ದು, ಈ ವೇಳೆ ಚೆನ್ನಕೇಶವುಲು ಪತ್ನಿ 6 ತಿಂಗಳು ಗರ್ಭಿಣಿಯಾಗಿದ್ದಳು.
Chenna Keshavlu wife Renuka gave birth to baby girl and both are fine .What won’t be fine is their future becos of rapists ugly shadow ..Please donate whatever u can for them Account: Action Aid for societal Advancement AASA,
— Ram Gopal Varma (@RGVzoomin) March 7, 2020
918010050607980
AXIS BANK
IFSC code: UTIB0001454 pic.twitter.com/FzsLsRGHwd
ಮಹಿಳೆಯ ಪತಿ ಚೆನ್ನಕೇಶವುಲು ಎನ್ಕೌಂಟರ್ಗೂ ಮುನ್ನ ಪೊಲೀಸರು ನಾಲ್ವರು ಆಪಾದಿತರನ್ನು ಕಸ್ಟಡಿಗೆ ತೆಗೆದುಕೊಂಡು ನಂತರ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ-ಕೊಲೆ ರೀತಿಯಲ್ಲೇ ನಡೆದ 15 ಕೃತ್ಯಗಳ ಬಗ್ಗೆ ವಿಚಾರಣೆ ನಡೆಸಲಾಯಿತು. ಆರಿಫ್ ಹಾಗೂ ಚೆನ್ನಕೇಶವುಲು ತಪ್ಪೊಪ್ಪಿಕೊಂಡಿದ್ದರು. ವೇಶ್ಯೆಯರು, ತೃತೀಯ ಲಿಂಗಿಗಳು ಹಾಗೂ ಮಹಿಳೆಯರ ಮೇಲೆ ಹೆದ್ದಾರಿಗಳಲ್ಲಿ ಅತ್ಯಾಚಾರ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.
ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ರಾಮ್ಗೋಪಾಲ್ ವರ್ಮಾ ಟ್ವೀಟ್
ತಾಯಿ ಮಗು ಆರೋಗ್ಯವಾಗಿದ್ದಾರೆ, ಈ ಕುರಿತು ಬಾಲಿವುಡ್ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿದ್ದಾರೆ. ಚೆನ್ನಕೇಶವುಲು ಪತ್ನಿ ಮಗು ಆರೋಗ್ಯವಾಗಿದ್ದು, ಅವರಿಗೆ ಯಾವುದೇ ರೀತಿಯ ಧನ ಸಹಾಯ ಮಾಡುವವರು ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್ ಶೇರ್ ಮಾಡಿದ್ದಾರೆ.
ಹೈದರಾಬಾದ್ ಆರೋಪಿಗಳು ರಾಜ್ಯದಲ್ಲೂ ಅತ್ಯಾಚಾರ ಮಾಡಿದ್ರು
ಆರೋಪಿಗಳ ಪೈಕಿ ಇಬ್ಬರು ಇನ್ನೂ 9 ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ 6 ಪ್ರಕರಣಗಳು ತೆಲಂಗಾಣದ ಗಡಿಗೆ ಹೊಂದಿಕೊಂಡಂತಿರುವ ಕರ್ನಾಟಕದ ಜಿಲ್ಲೆಗಳಲ್ಲಿ ನಡೆದಿತ್ತು ಎನ್ನುವುದು ಗಂಭೀರ ವಿಚಾರವಾಗಿದೆ.
ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡುವ ಸಮಯದಲ್ಲಿ ಗಂಗಾವತಿಗೆ ಹೊರಟಿದ್ದರು
ಪಶುವೈದ್ಯೆ ಮೇಲೆ ನವೆಂಬರ್ 27 ರಂದು ತ್ಯಾಚಾರ ಎಸಗಿ ಕೊಲೆ ಮಾಡುವ ವೇಳೆ ನಾಲ್ವರೂ ಆರೋಪಿಗಳು ತಮ್ಮ ಲಾರಿಯಲ್ಲಿ ಇಟ್ಟಿಗೆಯನ್ನು ಹೇರಿಕೊಂಡು ಹೈದರಾಬಾದಿನಿಂದ ಕನಾಘಟಕದ ಕೊಪ್ಪಳ ಜಿಲ್ಲೆ ಗಂಗಾವತಿಗೆ ಹೊರಟಿದ್ದರು ಎಂಬ ಅಂಶ ಈ ಬಹಿರಂಗವಾಗಿದೆ. ಈ ಎಲ್ಲರೂ ನಿತ್ಯ ತಮ್ಮ ಲಾರಿಯಲ್ಲಿ ಸರಕು ತುಂಬಿಕೊಂಡು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದರು.
ಡಿಸೆಂಬರ್ 6 ರಂದು ಎನ್ಕೌಂಟರ್
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಎನ್ಕೌಂಟರ್ಗೆ ಬಲಿಯಾಗಿದ್ದರು. ನಾಲ್ವರೂ ಆರೋಪಿಗಳ ಮೇಲೆ ಪೊಲೀಸ್ ಅಧಿಕಾರಿ ಸಿ ಸಜ್ಜನರ್ ಎನ್ಕೌಂಟರ್ ನಡೆಸಿದ್ದರು.