ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ದಾನ ಕೊಟ್ಟ ಐಟಿ ಕಂಪನಿ ಮಾಲೀಕ

|
Google Oneindia Kannada News

ಬೆಂಗಳೂರು, ಜನವರಿ 07: ಬೆಂಗಳೂರು ಮೂಲದ ಭಕ್ತರೊಬ್ಬರು, ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ಪಾದಕ್ಕೆ 1 ಕೋಟಿ ರು ಅರ್ಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ)ಯ ಶ್ರೀ ವೆಂಕಟೇಶ್ವರ ಗೋಸಂರಕ್ಷಣ ಯೋಜನೆಗೆ 1 ಕೋಟಿ ರು ನೀಡಲಾಗಿದೆ.

ಬೆಂಗಳೂರಿನ ಐಟಿ ಕಂಪನಿಯೊಂದರ ಮಾಲೀಕರಾದ ಅಮರನಾಥ್ ಚೌಧುರಿ ಹಾಗೂ ಪತ್ನಿ ಅವರು ದೇಗುಲದ ಗೋಸಂರಕ್ಷಣಾ ಟ್ರಸ್ಟಿಗೆ 1 ಕೋಟಿ ರು ಅರ್ಪಿಸಿದ್ದಾರೆ ಎಂದು ದೇಗುಲದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ಟಿಟಿಡಿ ಕಾರ್ಯಕಾರಿ ಅಧಿಕಾರಿ ಎವಿ ಧರ್ಮ ರೆಡ್ಡಿ ಅವರಿಗೆ 1 ಕೋಟಿ ರು ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ 9 ವರ್ಷಗಳಿಂದ ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ಅಮರನಾಥ್ ಅವರು ತಿರುಪತಿ ಬಾಲಾಜಿಯ ಪರಮಭಕ್ತರಾಗಿದ್ದಾರೆ.

Bengaluru IT company owner donates ₹1 crore to Tirupati Balaji temple

ಈ ಬೃಹತ್ ಮೊತ್ತದ ದಾನ ನೀಡಿ, ಇದನ್ನು ಗೋ ಸಂರಕ್ಷಣೆ ಕಾರ್ಯಕ್ಕೆ ಬಳಸುವಂತೆ ಕೇಳಿಕೊಂಡಿದ್ದಾರೆ. ಗೋವುಗಳ ಸಂರಕ್ಷಣೆ, ಪಾಲನೆ, ಪೋಷಣೆಗಾಗಿ ಟಿಟಿಡಿ ಪ್ರತ್ಯೇಕ ಟ್ರಸ್ಟ್ ರೂಪಿಸಿದೆ. ಈ ಟ್ರಸ್ಟ್ ನಿಂದ ಸಂರಕ್ಷಿಸಿದ ಗೋವುಗಳಿಂದಲೇ ದೇಗುಲದ ನಿತ್ಯ ಪೂಜೆಗೆ ಬೇಕಾದ ಹಾಲು ಇನ್ನಿತರ ಗೋಜನ್ಯ ಉತ್ಪನ್ನಗಳನ್ನು ಬಳಸಲಾಗುತ್ತದೆ.

English summary
A Bengaluru-based devotee of Lord Venkateswara on Monday donated ₹1 crore to the Tirumala hill temple near here with a request to use the fund for the temple-run Sri Venkateswara Gosamrakshana (care and protection of cows) Trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X