ತ್ವರಿತ ಅಲರ್ಟ್ ಗಳಿಗಾಗಿ
For Daily Alerts
Breaking: ಆಂಧ್ರಪ್ರದೇಶ ಸಚಿವ ಮೇಕಪಾಟಿ ಗೌತಮರೆಡ್ಡಿ ನಿಧನ
ಹೈದರಾಬಾದ್, ಫೆಬ್ರವರಿ 21: ಆಂಧ್ರ ಪ್ರದೇಶ ಸರ್ಕಾರದ ಐಟಿ ಸಚಿವ ಮೇಕಪಾಟಿ ಗೌತಮರೆಡ್ಡಿ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗೌತಮ್ ರೆಡ್ಡಿ ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್ಪೋದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳ ಜೊತೆ ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದ್ದರು, ಫೆಬ್ರವರಿ 20ರಂದು ದುಬೈಯಿಂದ ಹೈದರಾಬಾದ್ಗೆ ಬಂದಿದ್ದರು.
ಮಾಜಿ ಸಂಸದ ಮೇಕಪಾಟಿ ರಾಜಮೋಹನ್ ರೆಡ್ಡಿ ಅವರ ಪುತ್ರರಾದ ಗೌತಮ್ರೆಡ್ಡಿ ನೆಲ್ಲೂರು ಜಿಲ್ಲೆಯ ಆತ್ಮಾಕೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2014, 2019 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.
Recommended Video
Rohit
Sharma
Lifestyle:
200
ಕೋಟಿ
ರೂ.
ಒಡೆಯ
ರೋಹಿತ್
ಶರ್ಮಾ
ಲೈಫ್
ಸ್ಟೈಲ್
ಹೇಗಿದೆ
ಗೊತ್ತಾ?
|
Oneindia
Kannada
ಗೌತಮ್ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಹಠಾತ್ ಹೃದಯಾಘಾತ ಉಂಟಾಗಿದೆ. ಈ ವೇಳೆ ಜೂಬ್ಲಿ ಹಿಲ್ಸ್ನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡುತ್ತಿರುವಾಗಲೇ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
Comments
English summary
Andhra Pradesh Industries and IT Minister Mekapati Goutham Reddy has died of a heart attack. He collapsed on Monday morning with chest pain. Vigilant family members rushed him immediately to the hospital.