ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 15 ಜನರ ದುರ್ಮರಣ

Array

|
Google Oneindia Kannada News

ಕರ್ನೂಲು, ಮೇ 11: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ವೆಲದುರ್ತಿ ಎನ್ನುವಲ್ಲಿ ಬಸ್ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ 15 ಮಂದಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ SRS ಸಂಸ್ಥೆಯ ಬಸ್ ಹಾಗೂ ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿದ್ದು, ಹಲವು ಜನರು ಗಾಯಗೊಂಡಿದ್ದಾರೆಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೇಟಿಕುರ್ಕೆ ಬಳಿ ಭೀಕರ ರಸ್ತೆ ಅಪಘಾತ:ಒಂದೇ ಕುಟುಂಬದ ಐವರ ದುರ್ಮರಣ ಮೇಟಿಕುರ್ಕೆ ಬಳಿ ಭೀಕರ ರಸ್ತೆ ಅಪಘಾತ:ಒಂದೇ ಕುಟುಂಬದ ಐವರ ದುರ್ಮರಣ

ಅನಂತಪುರಂನಲ್ಲಿ ಮದುವೆ ಸಮಾರಂಭ ಮುಗಿಸಿ ತಮ್ಮ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತ ಪಟ್ಟ ಮತ್ತು ಗಾಯಗೊಂಡ ಎಲ್ಲರೂ ಒಂದೇ ಕುಟುಂಬದ ಸದಸ್ಯರಾಗಿದ್ದು, ಕರ್ನೂಲ್ ಜಿಲ್ಲೆಯ ರಾಮಪುರಂ ಗ್ರಾಮದವರು ಎಂದು ವೆಲದರ್ತಿ ಪೊಲೀಸರು ತಿಳಿಸಿದ್ದಾರೆ.

Andhra Pradesh: 15 dead and several injured after two vehicles collided in Veldurthi of Kurnool district today. More details awaited

ವೆಲದುರ್ತಿಯಿಂದ ಬೆಂಗಳೂರು - ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ (NH 44) ಪ್ರವೇಶಿಸುವ ವೇಳೆ, ಖಾಸಗಿ ಬಸ್ ಅನ್ನು ಓವರ್ ಟೇಕ್ ಮಾಡಲು ಹೋಗಿ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಗಾಯಗೊಂಡವರನ್ನು ಕರ್ನೂಲ್ ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಪ್ರಧಾನಿ ತೀವ್ರ ವಿಷಾದ ವ್ಯಕ್ತ ಪಡಿಸಿದ್ದಾರೆ.

ಸಾಗರ ಬಳಿ ಬಸ್ ಪಲ್ಟಿ:ಮೂವರು ಸಾವು,20 ಜನರಿಗೆ ಗಂಭೀರ ಗಾಯ ಸಾಗರ ಬಳಿ ಬಸ್ ಪಲ್ಟಿ:ಮೂವರು ಸಾವು,20 ಜನರಿಗೆ ಗಂಭೀರ ಗಾಯ

ಮೃತಪಟ್ಟವರ ಹೆಸರು, ವಿಳಾಸ ಸೇರಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

English summary
Andhra Pradesh: 13 dead and several injured after two vehicles collided in Veldurthi of Kurnool district today. More details awaited
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X