ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೂ ಗೋವು ಕೊಡ್ತೀರಾ? ಬಿಜೆಪಿಗೆ ಅಸಾದುದ್ದೀನ್ ಓವೈಸಿ ಪ್ರಶ್ನೆ

|
Google Oneindia Kannada News

ಹೈದರಾಬಾದ್, ನವೆಂಬರ್ 12: ಬಿಜೆಪಿ ವಿರುದ್ಧ ನಿರತರ ವಾಗ್ದಾಳಿ ನಡೆಸುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ತೆಲಂಗಾಣ ಚುನಾವಣೆಗೆ ಬಿಜೆಪಿ ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಟೀಕಿಸಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಭಾಗ್ಯನಗರ್ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಭಾಗ್ಯನಗರ್

ಬಿಜೆಪಿಯು ರಾಜ್ಯದಲ್ಲಿ ಒಂದು ಲಕ್ಷ ಗೋವುಗಳನ್ನು ಹಂಚುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅವರು ನನಗೂ ಒಂದು ಗೋವು ನೀಡುತ್ತಾರೆಯೇ? ನಾನು ಅದನ್ನು ಅತೀಯ ಗೌರವದೊಂದಿಗೆ ಸಾಕುತ್ತೇನೆ ಎಂದು ಭರವಸೆ ನೀಡುತ್ತೇನೆ. ಆದರೆ, ಪ್ರಶ್ನೆ ಏನೆಂದರೆ ಅವರು ನನಗೆ ಹಸು ನೀಡುತ್ತಾರೆಯೇ?'

ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ

ಇದು ನಗುವ ಸಂಗತಿಯಲ್ಲ. ಅದರ ಬಗ್ಗೆ ಯೋಚಿಸಿ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಪ್ರದೇಶಗಳು, ಕಟ್ಟಡಗಳ ಹೆಸರನ್ನು ಬದಲಿಸುವ ಬಿಜೆಪಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಓವೈಸಿ, ಅಮಿತ್ ಶಾ ಕೂಡ ತಮ್ಮ ಹೆಸರು ಬದಲಿಸಬೇಕು ಎಂದು ಲೇವಡಿ ಮಾಡಿದ್ದಾರೆ.

AIMIM chief Asaduddin Owaisi criticises bjps manifesto of Telangana elections2018

ಶಾ ಎನ್ನುವುದು ಪರ್ಷಿಯನ್ ಹೆಸರು. ಆ ಹೆಸರು ಇಟ್ಟುಕೊಂಡು ಅವರು ಏನು ಮಾಡುತ್ತಿದ್ದಾರೆ. ಅವರೂ ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕು ಎಂದು ಓವೈಸಿ ವ್ಯಂಗ್ಯವಾಡಿದರು.

ಇದಕ್ಕೂ ಮುಂಚೆ ಇತಿಹಾಸಕಾರ ಇರ್ಫಾನ್ ಹಬೀಬಿ ಅವರು ಕೂಡ ಅಮಿತ್ ಶಾ ಅವರು ಹೆಸರು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

'ರಾಮಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟುವುದು, ಹೈದರಾಬಾದಿನಲ್ಲಲ್ಲ!''ರಾಮಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟುವುದು, ಹೈದರಾಬಾದಿನಲ್ಲಲ್ಲ!'

ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಶಾ ಎನ್ನುವುದು ಇರಾನಿಯನ್ ಹೆಸರು. ಅಮಿತ್ ಶಾ ಏಕೆ ಹೆಸರು ಬದಲಿಸಿಕೊಳ್ಳಬೇಕು? ಇರಾನಿಯನ್ನರು ಆಕ್ರಮಣ ಮಾಡಿ ಲೂಟಿ ಮಾಡಲಿಲ್ಲ. ಹಾಗೆಯೇ ಓವೈಸಿಯ ಹಿಂದೂ ಪೂರ್ವಜರಂತೆ ಮುಸ್ಲಿಮರನ್ನಾಗಿ ಮತಾಂತರಿಸಲಿಲ್ಲ ಎಂದು ಕೆಲವರು ಹೇಳಿದ್ದಾರೆ.

English summary
AIMIM party chief Asaduddin Owaisi criticised the manifesto of BJP for Telangana elections 2018. He asked BJP the will they give one cow to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X