ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಯ್ಯೋ, ಮಾಜಿ ಮುಖ್ಯಮಂತ್ರಿ ಮೇಲೆಯೇ ಚಪ್ಪಲಿ ಎಸೆಯುವುದೇ?

|
Google Oneindia Kannada News

ಹೈದ್ರಾಬಾದ್, ನವೆಂಬರ್.29: ಅಧಿಕಾರದಲ್ಲಿ ಇದ್ದಾಗಲೇ ಒಂದು ಬೆಲೆ, ಅಧಿಕಾರ ಕೈ ಕೊಟ್ಟಾಗ ಮತ್ತೊಂದು ಬೆಲೆ. ಇಲ್ಲಿ ಅಧಿಕಾರಕ್ಕಿರುವ ಕಿಮ್ಮತ್ತು ವ್ಯಕ್ತಿಗೆ ಇರುವುದಿಲ್ಲ. ಅದರಲ್ಲೂ ರಾಜಕಾರಣದಲ್ಲಿ ಎದುರಾಳಿ ಪಕ್ಷದ ನಾಯಕರಿಗೆ ಗದ್ದುಗೆ ಕೈ ತಪ್ಪಿದರೆ ಅವರಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ.

ಆಂಧ್ರಪ್ರದೇಶದಲ್ಲೂ ಈಗ ಆಗಿರುವುದೇ ಅದೆ. ಅಸಲಿಗೆ ಇದು ನವೆಂಬರ್.28ರಂದು ಅಮರಾವತಿಯಲ್ಲಿ ನಡೆದಿರುವ ಘಟನೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದುವಿದ್ದ ಬಸ್ ಮೇಲೆಯೇ ಕಿಡಿಗೇಡಿಗಳು ಚಪ್ಪಲಿ ತೂರಿದ್ದಾರೆ.

ನಿಮ್ಮ ಮಕ್ಕಳು ಓದಿದ್ದು ಯಾವ ಶಾಲೆಯಲ್ಲಿ?' ನಾಯ್ಡುಗೆ ರೆಡ್ಡಿ ಪ್ರಶ್ನೆನಿಮ್ಮ ಮಕ್ಕಳು ಓದಿದ್ದು ಯಾವ ಶಾಲೆಯಲ್ಲಿ?' ನಾಯ್ಡುಗೆ ರೆಡ್ಡಿ ಪ್ರಶ್ನೆ

ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರೇ ಚಂದ್ರಬಾಬು ನಾಯ್ದು ಇರುವ ಬಸ್ ಮೇಲೆ ಚಪ್ಪಲಿ ತೂರಿರುವ ಆರೋಪ ಇದೀಗ ಕೇಳಿ ಬಂದಿದೆ. ವೈಎಸ್ಆರ್ ಸಿಪಿ ಕಾರ್ಯಕರ್ತರ ವಿರುದ್ಧ ತೆಲುಗು ದೇಶಂ ಪಾರ್ಟಿ ದೂರು ದಾಖಲಿಸಿದೆ.

A Slipper Was Hurled At The Bus Carrying Former Chief Minister Chandrababu Naidu.

ಮೊದಲೇ ವಿರೋಧ ವ್ಯಕ್ತಪಡಿಸಿದ್ದ ವೈಎಸ್ಆರ್ ಕಾಂಗ್ರೆಸ್

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರ ಅಮರಾವತಿ ಪ್ರವಾಸಕ್ಕೆ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಮೊದಲೇ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಲೆಕ್ಕಿಸದೇ ಮಾಜಿ ಮುಖ್ಯಮಂತ್ರಿಗಳು ಅಮರಾವತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದರು.

ವೆಂಕಟಪಲಂ ಬಳಿ ಚಂದ್ರಬಾಬು ನಾಯ್ದು ಇರುವ ಬಸ್ ಆಗಮಿಸುತ್ತಿದ್ದಂತೆ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ಬಸ್ ಗೆ ಅಡ್ಡ ಹಾಕಿದರು. ಚಂದ್ರಬಾಬು ನಾಯ್ಡು ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಕೆಲವು ಕಿಡಿಗೇಡಿಗಳು ಬಸ್ ಮೇಲೆ ಚಪ್ಪಲಿ ತೂರಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗಿತ್ತು. ಈ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತೆಲುಗು ದೇಶಂ ಪಾರ್ಟಿ ಮುಖಂಡರು ಆಗ್ರಹಿಸಿದ್ದಾರೆ.

English summary
A Slipper Was Hurled At The Bus Carrying Former Chief Minister Chandrababu Naidu. Telugu Desam Party Files Complaint Over Attack By YSRCP Activists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X