ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ
ಹೈದರಾಬಾದ್, ನವೆಂಬರ್ 09: ತೆಲಂಗಾಣದಲ್ಲಿ ಮತ್ತೊಮ್ಮೆ ಕೆ ಚಂದ್ರಶೇಖರ್ ರಾವ್ ಅವರು ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ.
ರಾಷ್ಟ್ರೀಯ ಮಾಧ್ಯಮ ಸಂಸ್ಥೆಯ ಪೊಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ (ಪಿಎಸ್ ಇ) ವರದಿಯಂತೆ ಶೇ75ರಷ್ಟು ಮಂದಿ ಕೆ ಚಂದ್ರಶೇಖರ್ ರಾವ್ ಅವರ ಪರ ಮತ ಹಾಕಿದ್ದಾರೆ.
ಸಮೀಕ್ಷೆ: ತೆಲಂಗಾಣದಲ್ಲಿ ಮತ್ತೆ ಟಿಆರ್ ಎಸ್ ಅಧಿಕಾರಕ್ಕೆ
ದೇಶದ ರಾಜಕೀಯ ಚಿತ್ರಣ ಹಾಗೂ ಟ್ರೆಂಡಿಂಗ್ ಬಗ್ಗೆ ಪಿಎಸ್ ಇ ಸದಾ ಕಾಲ ನಿಖರವಾದ ಅಪ್ಡೇಟ್ ನೀಡುತ್ತಾ ಬಂದಿದೆ. ತೆಲಂಗಾಣದ 17 ಸಂಸದೀಯ ಕ್ಷೇತ್ರಗಳಲ್ಲಿ ಟೆಲಿಫೋನ್ ಕರೆ ಮೂಲಕ ಸಂದರ್ಶನ ನೀಡಿ ಸಂಗ್ರಹಿಸಿದ ಮಾಹಿತಿಯಂತೆ ಈ ಫಲಿತಾಂಶ ನೀಡಲಾಗಿದೆ.
ಅಸೆಂಬ್ಲಿ ವಿಸರ್ಜನೆ ಮಾಡಿ, ಅವಧಿಗೆ ಮುನ್ನ ವಿಧಾನಸಭೆ ಚುನಾವಣೆ ಎದುರಿಸುವ ಪರಿಸ್ಥಿತಿ ತಂದ ಕೆಸಿಆರ್ ಕ್ರಮ ಸೂಕ್ತವಾಗಿದೆ ಎಂದು ಅಭಿಪ್ರಾಯ ಕೇಳಿ ಬಂದಿದೆ.
ರಿಪಬ್ಲಿಕ್ ಟಿವಿ ರೇಟಿಂಗ್: ತೆಲಂಗಾಣದಲ್ಲಿ ಕೆಸಿಆರ್ ಕಿಂಗ್, ಆಂಧ್ರದಲ್ಲಿ ಜಗನ್ ಮೇನಿಯಾ!
ಕೆಸಿಆರ್ ಸರ್ಕಾರವು ಕೈಗೊಂಡಿರುವ ರೈತಬಂಧು ಯೋಜನೆ, ವಿಮೆ ಯೋಜನೆ ನೀರಾವರಿ ಯೋಜನೆ, ಪರಿಸರ ಕಾಳಜಿ, ಸಾಮಾಜಿಕ ನ್ಯಾಯ ಎಲ್ಲವೂ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.