ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಧು-ವರರ ಕುಟುಂಬದ ನಡುವೆ ಮಾರಾಮಾರಿ, ಮೂವರಿಗೆ ಗಾಯ
ಸೂರ್ಯಪೇಟೆ, ನವೆಂಬರ್ 2: ವಧು-ವರರ ಕುಟುಂಬದ ನಡುವೆ ನಡೆದ ಮಾರಾಮಾರಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡದಿದೆ.
ವಧು-ವರರ ಕುಟುಂಬದ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ, ಕೋಪದಲ್ಲಿ ಪಕ್ಕದಲ್ಲಿ ಇದ್ದ ಕುರ್ಚಿಗಳನ್ನು ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ, ಈ ವೇಳೆ ಮೂವರು ಗಾಯಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಶಂಕು ಸ್ಥಾಪನೆಗೆ ಮುಹೂರ್ತ ನಿಗದಿ
ಸೂರ್ಯಪೇಟೆ ಜಿಲ್ಲೆಯ ಕೊಡದ ಮಂಡಲದ ಅಜಯ್ ಹಾಗೂ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಇಂದ್ರಜಾ ಎಂಬುವವರಿಗೆ ಅಕ್ಟೋಬರ್ 29ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದೇ ಎರಡು ಕುಟುಂಬದ ನಡುವೆ ಜಗಳ ಆರಂಭವಾಗಿತ್ತು.
ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ದೂರು ನೀಡಲು ನಿರಾಕರಿಸಿದ್ದಾರೆ.
Comments
English summary
Wedding celebrations in Telangana's Suryapet district turned ugly after a fight broke out between the bride and the groom's family members.
Story first published: Saturday, November 2, 2019, 14:24 [IST]