ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನೇನಿರಲಿದೆ?

By Manjunatha
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 09 : ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೆ ಪರಿಣಾಮಕಾರಿ ಪ್ರಣಾಳಿಕೆ ತರಲು ತಯಾರಿ ನಡೆಸಿದ್ದು, ಇದಕ್ಕಾಗಿ ಕೆಲವು ಮಂದಿ ಮುಖಂಡರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಈ ವಿಷಯವನ್ನು ಪ್ರಣಾಳಿಕಾ ಸಮಿತಿ ಅಧ್ಯಕ್ಷರಾಗಿರುವ ಎಂ.ವೀರಪ್ಪ ಮೋಯ್ಲಿ ಅವರು ಸ್ಪಷ್ಟಪಡಿಸಿದ್ದು. ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗುಜರಾತ್: ಕಡೇ ಘಳಿಗೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿಗುಜರಾತ್: ಕಡೇ ಘಳಿಗೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

2018 ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಣಾಳಿಕೆ ತಯಾರಿ ನಡೆದಿದ್ದು, ಈ ಸಂಬಂಧ ರಾಜ್ಯ ಪ್ರವಾಸ ಕೈಗೊಂಡಿದ್ದು ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ.

Veerappa Moily is all ready to prepare Manifesto

ಈ ಭಾರಿಯ ಪ್ರಣಾಳಿಕೆಯು ರಾಜ್ಯದ ಎಲ್ಲ ಭಾಗಗಳ ಜನಗಳನ್ನೂ ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದ್ದು, ಜೀವನ ಮೌಲ್ಯ ಸುಧಾರಣೆ, ಬಡತನ ನಿವಾರಣೆ, ಗ್ರಾಮೋದ್ಧಾರಗಳು ಪ್ರಣಾಳಿಕೆಯ ಪ್ರಮುಖ ವಿಷಯಗಳಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಮೊದಲಿಗೆ ಪ್ರಣಾಳಿಕೆಯ ಕಡರು ಸಿದ್ದಪಡಿಸಿ ಜನವರಿ 15ಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುತ್ತದೆ, ಆ ನಂತರ ಪ್ರಣಾಳಿಕೆ ಘೋಷಣೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಜನಪರ ಕಾರ್ಯಗಳೇ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಬಲವಾಗಲಿದೆ ಹಾಗಾಗಿ ಅವರ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಫಲಿಸುವಂತಹಾ ಹಾಗೂ ಅದಕ್ಕೆ ಪೂರಕವಾದ ಅಂಶಗಳುಳ್ಳ ಪ್ರಣಾಳಿಕೆಯನ್ನು ಈ ಬಾರಿ ರಾಜ್ಯದ ಜನತೆ ನೋಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

English summary
Congress Manifesto commity president Veerappa Moily all set to prepare manifesto for upcoming Karnataka assembly elections. He is on the way of state tour for creating peoples friendly manifesto. he said draft manifesto will be submitted by January 15th to CM and KPCC president
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X