ಪರಂ ಪಿಎ ರಮೇಶ್ ಆತ್ಮಹತ್ಯೆಗೂ ಬಿಜೆಪಿಗೂ ಸಂಬಂಧವೇ ಇಲ್ಲ: ಶೆಟ್ಟರ್
ಹುಬ್ಬಳ್ಳಿ, ಅಕ್ಟೋಬರ್ 13: "ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾನುವಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಆದರೆ ಐ. ಟಿ. ಮತ್ತು ಇ. ಡಿ. ರೈಡ್ ಆದಾಗ ರಾಜಕೀಯ ಮಾಡುವುದು ತಪ್ಪು. ಅಲ್ಲದೆ ಪರಮೇಶ್ವರ್ ಅವರೇ ಹೇಳಿದ್ದಾರೆ: ಐ. ಟಿ. ರೇಡ್ ನಲ್ಲಿ ಯಾವುದೇ ರಾಜಕೀಯ ಇಲ್ಲ, ಕಾನೂನು ಬದ್ಧವಾಗಿ ಎದುರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಪ್ತ ರಮೇಶ್ ಆತ್ಮಹತ್ಯೆ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ
ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ,ಅಮಿಶ್ ಶಾ ಬಗ್ಗೆ ಮಾತನಾಡಲು ವಿಷಯವಿಲ್ಲ. ಆದಾಯ ತೆರಿಗೆ ಇಲಾಖೆಯು ಪ್ರಾಮಾಣಿಕವಾಗಿ ಕೆಲಸ ಪ್ರಶಂಸೆ ಮಾಡುವುದನ್ನು ಬಿಟ್ಟು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ತಪ್ಪಿಲ್ಲ ಅಂದರೆ ಐ. ಟಿ. ತನಿಖೆಯನ್ನು ಎದುರಿಸಬೇಕು ಎಂದಿದ್ದಾರೆ.
ಇನ್ನು ಪರಮೇಶ್ವರ್ ಆಪ್ತ್ ಸಹಾಯಕ ರಮೇಶ ಆತ್ಮಹತ್ಯೆ ಪ್ರಕರಣವನ್ನು ಬಳಸಿಕೊಂಡು ಐ. ಟಿ. ದಾಳಿಗೆ ತಿರುವು ನೀಡುವ ಹುನ್ನಾರ ನಡೆದಿದೆ. ಪ್ರಕರಣದ ಸರಿಯಾದ ತನಿಖೆಯಾಗಲಿ, ನಿಜವಾದ ಅಂಶಗಳು ಹೊರಗೆ ಬರಲಿ. ಆತ್ಮಹತ್ಯೆಗೂ ಐಟಿಗೂ ಸಂಬಂಧವಿಲ್ಲ. ಆದರೂ ಕೂಡ ತನಿಖೆ ಆಗಲಿ. ನಿಜ ಯಾವುದು ಎಂಬುದು ಜನರಿಗೆ ಗೊತ್ತಾಗಲಿ ಎಂದಿದ್ದಾರೆ.
ಆತ್ಮಹತ್ಯೆ
ಪ್ರಕರಣದ
ತನಿಖೆ
ನಡೆಸಲಾಗುತ್ತಿದೆ:
ಬೊಮ್ಮಾಯಿ
ಪರಮೇಶ್ವರ್
ಆಪ್ತ
ಸಹಾಯಯಕ
ರಮೇಶ್
ಆತ್ಮಹತ್ಯೆ
ಬಗ್ಗೆ
ಈಗಾಗಲೇ
ಪ್ರಕರಣ
ದಾಖಲಿಸಿ,
ತನಿಖೆ
ನಡೆಸಲಾಗುತ್ತಿದೆ
ಎಂದು
ಗೃಹ
ಸಚಿವ
ಬಸವರಾಜ
ಬೊಮ್ಮಾಯಿ
ತಿಳಿಸಿದರು.
ಹುಬ್ಬಳ್ಳಿ
ವಿಮಾನ
ನಿಲ್ದಾಣದಲ್ಲಿ
ಭಾನುವಾರ
ಮಾಧ್ಯಮದವರ
ಜತೆ
ಮಾತನಾಡಿದ
ಅವರು,
ಪರಮೇಶ್ವರ್
ಆಪ್ತ
ಸಹಾಯಕ
ರಮೇಶ್
ಆತ್ಮಹತ್ಯೆ
ಪ್ರಕರಣದ
ಬಗ್ಗೆ
ಪೊಲೀಸ್
ಇಲಾಖೆ
ತನಿಖೆ
ನಡೆಸುತ್ತಿದೆ
ಎಂದರು.
ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಮೇಶ್ ಫೋನ್ ಕರೆಗಳು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ತನಿಖೆ ಆಗುತ್ತದೆ. ರಮೇಶ್ ಸಾವಿನ ಬಗ್ಗೆ ಸ್ವತಃ ಜಿ. ಪರಮೇಶ್ವರ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಮಾಹಿತಿ ನೀಡಿದರು.
ಪ್ರತಿಭಾವಂತ
ವಿದ್ಯಾರ್ಥಿಗಳಿಗೆ
ಸೀಟ್
ನೀಡದೆ
ಹಣ
ದೋಚಿದ್ದಾರೆ:
ಜೋಶಿ
ಕಿಡಿ
ಹುಬ್ಬಳ್ಳಿ:
ಆದಾಯ
ತೆರಿಗೆ
ಇಲಾಖೆಗೂ
ರಾಜಕೀಯಕ್ಕೂ
ಸಂಬಂಧವಿಲ್ಲ
ಎಂದು
ಪರಮೇಶ್ವರ್
ಸ್ಪಷ್ಟಪಡಿಸಿದ್ದಾರೆ.
ಪ್ರತಿಭಾವಂತ
ವಿದ್ಯಾರ್ಥಿಗಳಿಗೆ
ಸೀಟು
ನೀಡದೆ
ಹಣ
ದೋಚುವ
ಕೆಲಸ
ಕಾಲೇಜು
ಮ್ಯಾನೇಜ್
ಮೆಂಟ್
ಮಾಡಿದೆ
ಎಂದು
ಕೇಂದ್ರ
ಸಚಿವ
ಪ್ರಹ್ಲಾದ
ಜೋಶಿ
ಆರೋಪಿಸಿದ್ದಾರೆ.
ಜಿ. ಪರಮೇಶ್ವರ್ ಮೇಲೆ ಐಟಿ ದಾಳಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲಕ್ಷಾಂತರ- ಕೋಟ್ಯಂತರ ರುಪಾಯಿ ಹಣ ದೋಚಿದ್ದು ಈಗಾಗಲೇ ಮಾಧ್ಯಮದಲ್ಲಿ ಬಂದಿದೆ. ಕಾಂಗ್ರೆಸ್ ಮುಖಂಡರ ಮೇಲೆ ಮಾತ್ರ ಐಟಿ ರೇಡ್ ಆಗುತ್ತಿಲ್ಲ. ಬಿಜೆಪಿ ಮುಖಂಡರ ಮೇಲೆ ಸಹ ರೇಡ್ ಆಗಿರುವ ಉದಾಹರಣೆ ಬಹಳ ಇವೆ ಎಂದು ಕೈ ಪಾಳಯದ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪರಮೇಶ್ವರ್ ಪಿ.ಎ. ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡರುವುದು ದುರ್ದೈವ. ಸಣ್ಣಪುಟ್ಟ ಮಕ್ಕಳಿದ್ದಾರೆ ಅದಕ್ಕೆ ನನ್ನ ಅನುಕಂಪವಿದೆ. ಆದರೆ ಅವರು ಆತ್ಮಹತ್ಯೆಯಂತಹ ದೊಡ್ಡ ತೀರ್ಮಾನ ತೆಗೆದುಕೊಳ್ಳಬಾರದಿತ್ತು. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ಜೋಶಿ ಸಂತಾಪ ಸೂಚಿಸಿದರು.
ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ಆಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅವರ ಮನೆಗೆ ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರಮೇಶ್ವರ್ ಜೊತೆ ಬಹಳ ವರ್ಷಗಳಿಂದ ಇದ್ದರು. ಹೀಗಾಗಿ ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿರಬಹುದು. ಆದರೆ ಐಟಿ ಅಧಿಕಾರಿಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ನಾನು ಒಪ್ಪುವುದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯ ಆದಷ್ಟು ಬೇಗ ಗೊತ್ತಾಗುತ್ತದೆ ಎಂದರು.