ಹುಬ್ಬಳ್ಳಿ; ಚರಂಡಿ ನೀರಿನ ನಡುವೆಯೇ ದೇವರ ದರ್ಶನ ಪಡೆದ ಭಕ್ತರು
ಹುಬ್ಬಳ್ಳಿ, ಅಕ್ಟೋಬರ್ 9: ನಿನ್ನೆ ರಾತ್ರಿ ಸುರಿದ ಮಳೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ನಗರದ ತುಳಜಾ ಭವಾನಿ ದೇವಸ್ಥಾನದಲ್ಲಿ ಮಳೆಯಿಂದ ಚರಂಡಿ ನೀರು ನುಗ್ಗಿ, ಕಸ ತುಂಬಿಕೊಂಡು ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಭಾರಿ ಮಳೆಗೆ ಚನ್ನಪಟ್ಟಣದ ಹಲವೆಡೆ ಜಲಾವೃತ; ಯಾರ ಆದೇಶಕ್ಕೂ ಜಗ್ಗದ ಅಧಿಕಾರಿಗಳು
ವಿಜಯ ದಶಮಿ ಹಾಗೂ ಬನ್ನಿ ಹಬ್ಬದಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಚರಂಡಿ ನೀರು ದೇವಸ್ಥಾನಕ್ಕೆ ನುಗ್ಗಿದ್ದರಿಂದ ದೇವಸ್ಥಾನದ ಒಳಗೆ ಬರಲು ಪರದಾಡಿದರು. ಈ ಮಧ್ಯೆಯೂ ಮೊಳಕಾಲಿನವರೆಗಿನ ಆ ಚರಂಡಿ ನೀರಿನಲ್ಲಿಯೇ ನಿಂತು ದೇವರ ದರ್ಶನ ಪಡೆದುಕೊಂಡರು.
ಮಹಾನಗರ ಪಾಲಿಕೆಯವರು ಸರಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದೇ ಪ್ಲಾಸ್ಟಿಕ್ ಹಾಗೂ ಕಸ ಕಟ್ಟಿಕೊಂಡು ಒಳಚರಂಡಿ ನೀರು ದೇವಸ್ಥಾನಕ್ಕೆ ನುಗ್ಗಲು ಕಾರಣ. ಇದಕ್ಕೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Comments
English summary
The rain that poured in last night has created a huge disturbance in the city of Hubballi. The city's Tulja Bhawani Temple filled with drainwater and debris.
Story first published: Wednesday, October 9, 2019, 17:10 [IST]