ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಹಿರೇಮಠ್ ಆಗ್ರಹ
ಹುಬ್ಬಳ್ಳಿ, ಆಗಸ್ಟ್ 3: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಐಟಿ ದಾಳಿಯನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಶಿವಕುಮಾರ್
ಅವರಿಂದ
ಕೂಡಲೇ
ರಾಜೀನಾಮೆ
ಪಡೆಯಬೇಕು.
ಇಲ್ಲವೆ
ಮುಖ್ಯಮಂತ್ರಿಗಳು
ಅವರನ್ನು
ಸಂಪುಟದಿಂದ
ಕೈಬಿಡಬೇಕು
ಎಂದು
ಒತ್ತಾಯಿಸಿದ್ದಾರೆ.
ನಗರದಲ್ಲಿ
ಗುರುವಾರ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
"ಡಿ.ಕೆ.ಶಿವಕುಮಾರ್
ಭ್ರಷ್ಟಾಚಾರದ
ಪ್ರತಿರೂಪ;
ಇವರು
ಸಾರ್ವಜನಿಕ
ಜೀವನದಲ್ಲಿ
ಇರಲು
ಅನರ್ಹರು.
ಹೀಗಾಗಿ
ಅವರ
ಮೇಲಿನ
ವ್ಯವಸ್ಥಿತ
ಐಟಿ
ದಾಳಿ
ಅತ್ಯಂತ
ಸೂಕ್ತವಾಗಿದೆ,"
ಎಂದು
ಸಮರ್ಥಿಸಿಕೊಂಡರು.
"ಡಿ.ಕೆ. ಶಿವಕುಮಾರ ಅಕ್ರಮಗಳ ಬಗ್ಗೆ ಪ್ರಧಾನಮಂತ್ರಿ, ಎಐಸಿಸಿ ಅಧ್ಯಕ್ಷರು, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಈ ಕಾರಣದಿಂದಲೇ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಶಿವಕುಮಾರ್ ವಿರುದ್ಧ ತನಿಖೆ ನಡೆದಿರಲಿಲ್ಲ," ಎಂದು ಅವರು ಹೇಳಿದರು.
"ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿ ಇದ್ದಾಗ ಡಿಕೆಶಿ ಅವರ ಎಲ್ಲ ಅಕ್ರಮಗಳನ್ನು ಮುಚ್ಚಿ ಹಾಕಿತ್ತು. ಈಗ ಅವರ ಎಲ್ಲ ಅಕ್ರಮಗಳಿಗೂ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ಉತ್ತರ ಸಿಗಲಿದೆ," ಎಂದು ಹಿರೇಮಠ್ ಪ್ರತಿಪಾದಿಸಿದರು.
ರಾಜಕೀಯ
ಬಣ್ಣ
ಬೇಡ
ಸಚಿವ
ಡಿ.ಕೆ.ಶಿವಕುಮಾರ
ಅವರ
ಮನೆ,
ಕಚೇರಿ,
ಸಂಬಂಧಿಕರ
ಮನೆ
ಮೇಲೆ
ತೆರಿಗೆ
ಇಲಾಖೆ
ಅಧಿಕಾರಿಗಳು
ನಡೆಸಿರುವ
ದಾಳಿಗೆ
ರಾಜಕೀಯ
ಬಣ್ಣ
ಬಳಿಯುವುದು
ಬೇಡ
ಎಂದು
ಸಾಮಾಜಿಕ
ಕಾರ್ಯಕರ್ತ
ಎಸ್.ಆರ್.ಹಿರೇಮಠ್
ಹೇಳಿದ್ದಾರೆ.
"ಅಕ್ರಮ ಸಂಪತ್ತು ಹಾಗೂ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾದವರ ಮೇಲೆ ದಾಳಿ ನಡೆಯುವುದು ಸಾಮಾನ್ಯ. ಅಲ್ಲದೆ ಶಿವಕುಮಾರ್ ಅವರು ಅಕ್ರಮದಲ್ಲಿ ತೊಡಗಿರುವ ಕುರಿತು ಸಾಕಷ್ಟು ಸಾಕ್ಷಾಧಾರಗಳನ್ನು ಈಗಾಗಲೇ ಕೋರ್ಟ್ ಹಾಗೂ ಇಡಿಗೆ ಸಲ್ಲಿಸಲಾಗಿದ್ದು, ಇದರ ಆಧಾರದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರಬಹುದು. ಹೀಗಾಗಿ ಈ ದಾಳಿಗೆ ರಾಜಕೀಯ ಬಣ್ಣ ಬಳಿಯಬಾರದು," ಎಂದು ಅವರು ಸ್ಪಷ್ಟಪಡಿಸಿದರು.