ಹುಬ್ಬಳ್ಳಿಯಲ್ಲಿ ಸಂಭ್ರಮದ ರಾಯರ ಆರಾಧನೆ, ರಥೋತ್ಸವ
ಹುಬ್ಬಳ್ಳಿ, ಆಗಸ್ಟ್ 21: ಸ್ಥಳೀಯ ಭವಾನಿ ನಗರದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನೆ ನಂತರ ಬರುವ ಉತ್ತರಾರಾಧನೆ ದಿನದಂದು ಈ ರಥೋತ್ಸವ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ನಡೆಯಿತು.
ರಥೋತ್ಸವ ಮತ್ತು ಉತ್ತರಾರಾಧನೆ ಅಂಅಗವಾಗಿ ಅರ್ಚಕ ಗುರುರಾಜ ಸಾಮಗ ನೇತೃತ್ವದಲ್ಲಿ ಭಾನುವಾರ ಬೆಳಗಿನಿಂದಲೇ ವಿಶೇಷ ಪೂಜೆಗಳು ನಡೆದವು. ಪ್ರಾತಃಕಾಲದಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ, ರಾಯರ ದರ್ಶನಕ್ಕೆ ಕಾಯುತ್ತಿದ್ದರು.
ರಾಯರ ರಥೋತ್ಸವದ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಘವೇಂದ್ರ ಆರಾಧನಾ ಉತ್ಸವ ಸಮಿತಿ ವ್ಯವಸ್ಥಾಪಕ ಕೃಷ್ಣಮೂರ್ತಿ ಜೋಶಿ, ಪಂ.ಕೃಷ್ಣಾಚಾರ್ಯ ಸಿರಗುಪ್ಪಾ ಸೇರಿದಂತೆ ಇತರೆಡೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತ ಸಮೂಹ ಪಾಲ್ಗೊಂಡಿತ್ತು.
Comments
English summary
Raghavendra swami aradhane, rathotsava happened in Hubballi with a huge crowd. Morning to evening saveral rituals followed in mutt.