ಹುಬ್ಬಳ್ಳಿ: ಜಗದೀಶ್ ಶೆಟ್ಟರ್-ದೇಶಪಾಂಡೆ ನಡುವೆ ಮಾತಿನ ಚಕಮಕಿ
ಹುಬ್ಬಳ್ಳಿ, ನವೆಂಬರ್ 17: ಹುಬ್ಬಳ್ಳಿಯಲ್ಲಿ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ಹಿರಿಯ ರಾಜಕೀಯ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಇಂದಿರಾ ಕ್ಯಾಂಟೀಸ್ ಉದ್ಘಾಟನೆಗೆ ಮಾಜಿ ಸಿಎಂ ಬಿಜೆಪಿಯ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ಸಚಿವ ಆರ್.ವಿ.ದೇಶಪಾಂಡೆ ಅವರು ಆಗಮಿಸಿದ್ದರು, ಈ ಸಂದರ್ಭ ವಿಷಯವೊಂದಕ್ಕೆ ಸಂಬಂಧಿಸಿದಂತೆ ಪರಸ್ಪರ ನಾಯಕರು ಮಾತಿನ ಸಮರಕ್ಕೆ ಇಳಿದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ 30% ಹಣ ನೀಡುತ್ತದೆ ಉಳಿದ 70% ಹಣ ಪಾಲಿಕೆ ಭರಿಸಬೇಕಾಗುತ್ತದೆ. ಆದರೆ ಹಬ್ಬಳ್ಳಿ-ಧಾರವಾಡ ಪಾಲಿಕೆ ಸಂಕಷ್ಟದಲ್ಲಿದ್ದು ಆ ಹಣವನ್ನು ರಾಜ್ಯ ಸರ್ಕಾರವೇ ನೀಡಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹ ಮಾಡಿದರು.
ಡಿಕೆಶಿಗೆ ಇಡಿ ನೋಟಿಸ್: ರಾಜಕೀಯ ಷಡ್ಯಂತ್ರ ಎಂದ ದಿನೇಶ್ ಗುಂಡೂರಾವ್
ಇದಕ್ಕೆ ಕೆರಳಿದ ದೇಶಪಾಂಡೆ ಅವರು, ಸರ್ಕಾರ ತಾನು ಕೊಡಬೇಕಾದದ್ದನ್ನು ಕೊಡುತ್ತದೆ. ಪಾಲಿಕೆಯಿಂದ ಕೊಡಬೇಕಾದುದ್ದನ್ನು ಪಾಲಿಕೆಯೇ ಕೊಡಬೇಕು ಎಂದು ಕಠುವಾಗಿ ಹೇಳಿದರು.
ಇಡಿಯಿಂದ ನೊಟೀಸ್ ಬಂದಿಲ್ಲ, ಬೇರೆ ನೊಟೀಸ್ ಬಂದಿದೆ: ಡಿಕೆಶಿ
ಇದು ಜಗದೀಶ್ ಶೆಟ್ಟರ್ ಅವರನ್ನು ಕೆರಳಿಸಿತು, ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಶೇ.70ರಷ್ಟು ಅನುದಾನವನ್ನು ಸರ್ಕಾರವೇ ನೀಡಬೇಕು ಎಂದು ಪಟ್ಟು ಹಿಡಿದರು.
ಸಿಸಿಬಿಯು ರೆಡ್ಡಿ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿಎಸ್ವೈ
ಕೊನೆಗೆ ಮಣಿದ ಸಚಿವ ದೇಶಪಾಂಡೆ ಅವರು 'ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದಾಗ, ಪರಿಸ್ಥಿತಿ ತಿಳಿಯಾಯಿತು.