'ಅಯ್ಯರ್ ಹೇಳಿಕೆ ಕಾಂಗ್ರೆಸ್ ಪಕ್ಷದ ದಿವಾಳಿತ ತೋರಿಸುತ್ತೆ'
ಹುಬ್ಬಳ್ಳಿ, ಡಿಸೆಂಬರ್. 12 : 'ಪ್ರಧಾನಿ ನರೇಂದ್ರ ಮೋದಿ ನೀಚ ಎಂದು ಮಣಿಶಂಕರ್ ಅಯ್ಯರ್ ಹೇಳಿಕೆ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನ ತೋರಿಸುತ್ತದೆ' ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಬಿಟ್ಟು ಲೂಟಿ ಕೆಲಸ ಮಾಡಿದೆ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಮುಖಂಡ ಮಣಿಶಂಕರ ಅಯ್ಯರ್ ಮನೆಯಲ್ಲಿ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಸಭೆ ನಡೆದಿಲ್ಲಾ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ' ಎಂದು ಸವಾಲು ಹಾಕಿದರು.
'ಪಾಕಿಸ್ತಾನದ ಅಧಿಕಾರಿ ಜೊತೆ ಸಭೆ ನಡೆಸಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ, ಸ್ಪಷ್ಟನೆ ನೀಡಿಲ್ಲವಾದ್ದರಿಂದ ದಾಲ್ ಮೆ ಕುಚ್ ಕಾಲಾ ಹೈ ಎಂದರ್ಥ ಎಂದಿದ್ದಾರೆ' ಎಂದರು.
ನನ್ನನ್ನು ಇಲ್ಲವಾಗಿಸುವುದಕ್ಕೆ ಪಾಕ್ ನಲ್ಲಿ ಅಯ್ಯರ್ ಸುಪಾರಿ: ಮೋದಿ
'ಕಾಂಗ್ರೆಸ್ನವರು ಶತ್ರು ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇದು ನಾನು ಮಾಡಿದ ಆರೋಪ ಅಲ್ಲ. ಬದಲಿಗೆ ಈ ದೇಶದ ಪ್ರಧಾನಿ ಮಾಡಿರುವ ಆರೋಪ, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ' ಎಂದು ಹೇಳಿದರು.
'ಕಾಂಗ್ರಸ್ ಪಾಳಯದಲ್ಲಿ ನಡುಕ ಹುಟ್ಟಿದೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ಬಿಜೆಪಿ ಮುಗಿಸಬೇಕು ಎಂದು ಸಂಚು ಮಾಡುತ್ತಿದ್ದಾರೆ' ಎಂದು ಜೋಶಿ ಆರೋಪಿಸಿದರು.
'ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಬಿಜೆಪಿಯ ಗೆಲುವು, ರಾಜ್ಯದ ಚುನಾವಣೆ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದರು.