ಹುಬ್ಬಳ್ಳಿ ಧಾರವಾಡ; ಇನ್ನು ಮುಂದೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ
ಹುಬ್ಬಳ್ಳಿ, ನವೆಂಬರ್ 1: ಕನ್ನಡ ರಾಜ್ಯೋತ್ಸವವಾದ ಇಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕನ್ನಡ ಭಾಷೆಯ ಪರವಾಗಿ ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದೆ.
ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ
ಹೌದು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಹೋಟೆಲ್, ಅಂಗಡಿ, ಲಾಡ್ಜ್, ಕಲ್ಯಾಣ ಮಂಟಪ, ಬಾರ್ ವಾಣಿಜ್ಯ ಕಟ್ಟಡಗಳ ನಾಮಫಲಕವನ್ನು ಕನ್ನಡದಲ್ಲೇ ಹಾಕಬೇಕು ಎನ್ನುವ ಆದೇಶವನ್ನ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತ ಸುರೇಶ ಹಿಟ್ನಾಳ ಹೊರಡಿಸಿದ್ದಾರೆ.
ಕೆಎಂಸಿ ಕಾಯ್ದೆ 1976ರ ಅನ್ವಯ ಉದ್ದಿಮೆದಾರರು ವ್ಯಾಪಾರಿಗಳು ಇನ್ನು ಮುಂದೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಪ್ರಧಾನವಾಗಿ ಬಳಸಿ ಪ್ರದರ್ಶಿಸುವುದು ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಲಾಗಿದೆ. ಪಾಲಿಕೆಯ ಈ ಆದೇಶ ಜಾರಿಯಾದಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಇನ್ನು ಮುಂದೆ ಕನ್ನಡದಲ್ಲಿ ನಾಮಫಲಕಗಳು ರಾರಾಜಿಸಲಿವೆ. ಪಾಲಿಕೆಯ ಈ ಆದೇಶವನ್ನು ಕನ್ನಡ ಪರ ಹೋರಾಟಗಾರರು ಸ್ವಾಗತಿಸಿದ್ದು ಪಾಲಿಕೆಯ ಆದೇಶ ಜಾರಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.