ದೊಡ್ಡ ತ್ಯಾಗ ಮಾಡಿದ್ದಾರೆ, ಅವರಿಗೆ ಹುದ್ದೆ ಕೊಡುತ್ತೇವೆ; ಶೆಟ್ಟರ್
ಹುಬ್ಬಳ್ಳಿ, ಡಿಸೆಂಬರ್ 9: "ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಬಾರಿಸಿ, ಅಧಿಕಾರವನ್ನು ಭದ್ರಪಡಿಸಿಕೊಂಡಿದೆ. ಆದರೆ ಸೋತ ಕ್ಷೇತ್ರದಲ್ಲಿ ಯಾಕೆ ಸೋಲಾಯಿತು ಎನ್ನುವ ಕುರಿತು ಆತ್ಮಾವಲೋಕನ ಮಾಡುತ್ತೇವೆ" ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
"ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು"; ಕೋಟ ಶ್ರೀನಿವಾಸ ಪೂಜಾರಿ
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ಅಭ್ಯರ್ಥಿಗಳು ಭರ್ಜರಿಯಾಗಿ ಜಯಸಾಧಿಸಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಹಾಗೂ ಹಿರಿಯರಾದ ವಿಶ್ವನಾಥ ಯಾಕೆ ಸೋತರು ಎನ್ನುವ ಕುರಿತು ಆತ್ಮಾವಲೋಕನ ಮಾಡುತ್ತೇವೆ" ಎಂದು ತಿಳಿಸಿದರು.
"ಈ ಇಬ್ಬರು ನಾಯಕರು ದೊಡ್ಡ ತ್ಯಾಗ ಮಾಡಿದ್ದಾರೆ. ಹಾಗಾಗಿ ಅವರಿಗೆ ಪಕ್ಷದಿಂದ ಹುದ್ದೆ ಹಾಗೂ ಗೌರವ ಕೊಡುವ ಕೆಲಸ ಮಾಡಲಾಗುವುದು" ಎಂದು ಶೆಟ್ಟರ್ ಹೇಳಿದ್ದಾರೆ.
Comments
English summary
"BJP won the by-election and secured power, we also give priority to defeated disqualified mla's" said Minister Jagadish Shettar in hubballi
Story first published: Monday, December 9, 2019, 18:17 [IST]