ಇದೊಂದು ರಾಜಕೀಯ ಹುನ್ನಾರ, ಐಟಿ ದಾಳಿಗೆ ಸಿದ್ದರಾಮಯ್ಯ ಕಿಡಿ
ಹುಬ್ಬಳ್ಳಿ, ಏಪ್ರಿಲ್ 24: ತಮ್ಮ ಆಪ್ತ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮನೆ ಮೇಲೆ ಐಟಿ ದಾಳಿ ನಡೆಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರುದ್ಧರಾಗಿದ್ದಾರೆ. 'ಇದೊಂದು ರಾಜಕೀಯ ಹುನ್ನಾರ' ಎಂದು ಅವರು ಕಿಡಿಕಾರಿದ್ದಾರೆ.
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಸಿ ಮಹದೇವಪ್ಪ ಮನೆ ಮೇಲೆ ನಡೆದ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮನೆ ಮೇಲೆ ಐಟಿ ದಾಳಿ
"ಇದೊಂದು ರಾಜಕೀಯ ಹುನ್ನಾರ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮನೆ ಮೇಲೆ ಯಾಕೆ ಐಟಿ ದಾಳಿ ನಡೆದಿಲ್ಲ?" ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಐಟಿ ದಾಳಿ ಮಾಡಿ ಬೆದರಿಕೆ ಹಾಕುತ್ತಿದ್ದಾರೆ," ಟೀಕಿಸಿದರು.
ಇದೇ ವೇಳೆ ವರುಣದಲ್ಲಿ ಯಾವ ಬಿಜೆಪಿ ಅಭ್ಯರ್ಥಿ ನಿಲ್ಲಿಸಿದ್ರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಅವರು ಹೇಳಿದರು.
ನಾಮಪತ್ರ
ಇಂದು
ಮಧ್ಯಾಹ್ನ
2
ರಿಂದ
3
ಗಂಟೆ
ಒಳಗೆ
ಬಾದಾಮಿಯಲ್ಲಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ನಾಮಪತ್ರ
ಸಲ್ಲಿಸಲಿದ್ದಾರೆ.
3
ಗಂಟೆ
ಮೊದಲು
ನಾಮಪತ್ರ
ಸಲ್ಲಿಸಬೇಕಾಗಿದ್ದು
ಅದಕ್ಕೂ
ಮೊದಲು
ಉಮೇದುವಾರಿಕೆ
ಸಲ್ಲಿಸಲಿದ್ದಾರೆ.