ಎಚ್ಡಿಕೆ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ ಅದು ದುರ್ದೈವ
Recommended Video
ಹುಬ್ಬಳ್ಳಿ, ಆಗಸ್ಟ್ 30: ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಯನ್ನು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜೋಶಿ, ಡಿಕೆಶಿಯವರನ್ನು ಉಲ್ಲೇಖಿಸಿ, " ಉಪ್ಪು ತಿಂದವರು ನೀರು ಕುಡಿಯಲೇ ಬೇಕು" ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಜಕೀಯ ಪ್ರೇರಿತ ತಂತ್ರವನ್ನು ಎದುರಿಸಿ ಗೆಲ್ಲುವೆ: ಡಿಕೆಶಿ
" ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಯಂತೆ, ಒಂದು ವೇಳೆ ಕುಮಾರಸ್ವಾಮಿ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ, ಅದು ದುರ್ದೈವ" ಎಂದು ಜೋಶಿ ಹೇಳಿದ್ದಾರೆ.
" ಇಡಿ ಸಮನ್ಸ್ ಜಾರಿ ಮಾಡಿದ ವಿಚಾರವನ್ನು ಇಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು, ಇದರಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ" ಎಂದು ಜೋಶಿ, ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
" ಅಧಿಕಾರ ಇದ್ದಾಗ ಜನರ ಬಳಿ ಹೋಗುವವರು, ಅಧಿಕಾರ ಹೋದ ಕೂಡಲೇ ಮಜಾ ಮಾಡಲು ಹೋಗಿದ್ದಾರೆ" ಎಂದು ಕುಮಾರಸ್ವಾಮಿಯವರ, ಮಲೇಷ್ಯಾ ಪ್ರವಾಸವನ್ನು ಜೋಶಿ ವಿಶ್ಲೇಷಿಸಿದ್ದಾರೆ.
ಸಂಸತ್ತಿಗೆ ಗೈರು: ಸಚಿವರಿಗೆ ಕಾದಿದೆ ಆಘಾತ!
" ರಾಜಕೀಯ ಪ್ರೇರಿತ ದಾಳಿ ನನ್ನ ಮೇಲೆ 2017ರಿಂದ ನಡೆಯುತ್ತಲೇ ಇದೆ. ಆದರೆ ಇವೆಲ್ಲವನ್ನೂ ನಾನು ಎದಿರುಸುತ್ತೇನೆಯೇ ಹೊರತು ಯಾವುದರಿಂದಲೂ ಪಲಾಯನ ಮಾಡುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್, ಇಡಿ ಸಮನ್ಸ್ ಬಗ್ಗೆ ಹೇಳಿದ್ದಾರೆ.