ಪಾಕ್ ಪರ ಘೋಷಣೆ; ವಕೀಲರ ಮೇಲೆ ಹೈಕೋರ್ಟ್ ಗರಂ
ಹುಬ್ಬಳ್ಳಿ, ಫೆಬ್ರವರಿ 27: ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದ ಇಲ್ಲಿನ ಕೆಎಲ್ಇ ಕಾಲೇಜಿನ ಮೂವರು ವಿದ್ಯಾರ್ಥಿಗಳ ಪರವಾಗಿ ವಾದಿಸಲು ನಿರ್ಧರಿಸಿದ್ದ ಹುಬ್ಬಳ್ಳಿ ಬಾರ್ ಕೌನ್ಸಿಲ್ ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ವಿದ್ಯಾರ್ಥಿಗಳ ಪರವಾಗಿ ಜಾಮೀನು ಅರ್ಜಿ ಸಲ್ಲಿಸುವವರು ಧಾರವಾಡ ಜಿಲ್ಲಾ ನ್ಯಾಯಲಯ ಸಂಪರ್ಕಿಸಿ ಸಲ್ಲಿಸಬಹುದು ನಮ್ಮ ಕೌನ್ಸಿಲ್ ಈ ಕುರಿತು ತಟಸ್ಥ ನಿಲುವು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ. ಆರೋಪಿಗಳ ಪರ ವಕಾಲತ್ತು ವಹಿಸಲು ಅವಕಾಶ ಕೊಡದಿರುವುದನ್ನು ಪ್ರಶ್ನಿಸಿ ವಕೀಲ ವೆಂಕಟರೆಡ್ಡಿ ಎನ್ನುವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಓಕಾ ಅವರು ಬಾರ್ ಕೌನ್ಸಿಲ್ನ್ನು ತರಾಟೆಗೆ ತೆಗೆದುಕೊಂಡು, ಆರೋಪಿಗಳ ಪರ ವಾದಿಸುವ ವಕೀಲರಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದವರನ್ನು ಮತ್ತೆ ಬಂಧಿಸಿದ ಪೊಲೀಸರು
ದೇಶದ್ರೋಹಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮೂವರು ವಿದ್ಯಾರ್ಥಿಗಳ ಪರ ಕೋರ್ಟ್ನಲ್ಲಿ ವಾದಿಸದಿರಲು ಬಾರ್ ಕೌನ್ಸಿಲ್ ನಿರ್ಧರಿಸಿತ್ತು. ಜಾಮೀನು ಅರ್ಜಿ ಸಲ್ಲಿಸಲು ಧಾರವಾಡಕ್ಕೆ ತೆರಳಿದ್ದ ಬೆಂಗಳೂರು ವಕೀಲರ ಮೇಲೆ ಹಲ್ಲೆಗೂ ಯತ್ನ ನಡೆದಿತ್ತು.
ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಅಮೀರ್, ಬಾಸಿತ್, ತಾಲಿಬ್ ಎನ್ನುವರ ಮೂವರು ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ. ಅರವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ನಡೆಯುತ್ತಿದೆ.