ಹುಬ್ಬಳ್ಳಿಗೆ ರಾಷ್ಟ್ರಪತಿ ಆಗಮನ: ಉಡುಗೊರೆಯಾಗಿ ಸಿದ್ದಾರೂಢರ ಬೆಳ್ಳಿ ಪ್ರತಿಮೆ, ಧಾರವಾಡ ಪೇಡ
ಹುಬ್ಬಳ್ಳಿ, ಸೆಪ್ಟೆಂಬರ್ 24: ಮಹಾನಗರ ಪಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಪೌರ ಸನ್ಮಾನ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಸಿದ್ಧತೆ, ಹಾಗೂ ಸ್ವಚ್ಛತಾ ಕೆಲಸಗಳು ಭರದಿಂದ ಸಾಗುತ್ತಿವೆ. ರಾಷ್ಟ್ರಪತಿ ಆಗಮಿಸುವ ಕಾರ್ಯಕ್ರಮದಲ್ಲಿ ಅವ್ಯವಹಾರಗಳಿಗೆ ಆಸ್ಪದ ನೀಡುವುದಿಲ್ಲ. ಪ್ರತಿ ವ್ಯವಹಾರವನ್ನು ಚೆಕ್ ಮೂಲಕವೇ ನಡೆಸಲಾಗುವುದು ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದ್ದಾರೆ.
ನಗರದ ದೇಶಪಾಂಡೆ ನಗರದ ಜಿಮ್ ಖಾನಾ ಮೈದಾನದಲ್ಲಿ ಆಯೋಜಿಸಿರುವ ರಾಷ್ಟ್ರಪತಿಗೆ ಪೌರ ಸನ್ಮಾನ ಕಾರ್ಯಕ್ರಮದ ಸಿದ್ದತೆ ಕಾರ್ಯ ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈರೇಶ, " ತುರ್ತು ಕಾರ್ಯಕ್ರಮ ಆಗಿರುವುದರಿಂದ ಸರಕಾರದಿಂದ ಯಾವುದೇ ಅನುಧಾನ ಪಡೆಯದೇ ಜಿಲ್ಲಾಡಳಿತದಿಂದ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ನಿಯಂತ್ರಣದ ನಿರ್ಮಿತಿ ಕೇಂದ್ರಕ್ಕೆ ಎರಡು ಕೋಟಿವರೆಗೆ ಖರ್ಚು ಮಾಡಲು ವಿನಾಯತಿ ಇದ್ದು, ಆ ಮೂಲಕ ಸಿದ್ಧತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮೇಯರ್ ಸ್ಪಷ್ಟಪಡಿಸಿದರು. ಹೀಗಿದ್ದರೂ ಕೊಟೇಶನ್ ಕರೆದಿರುವ ಉದ್ದೇಶದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೇಯರ್ ವಿಚಲಿತರಾಗಿದ್ದ ಕಂಡುಬಂದಿತು.
ಮುಂದುವರಿಸಿ, ರಾಷ್ಟ್ರಪತಿ ಮುರ್ಮು ಅವರು ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮ ನೆರೆವೇರಿಸಲು ಮೈಸೂರಿಗೆ ಆಗಮಿಸಲಿದ್ದಾರೆ. ನಂತರ ಧಾರವಾಡದ ಪ್ರತಿಷ್ಠಿತ ಐಐಐಟಿಯ ಉದ್ಘಾಟನೆಗೆ ಬರುತ್ತಿದ್ದಾರೆ. ಹಾಗಾಗಿ ಅಲ್ಲಿನ ಕಮಿಷನರ್ ಹಾಗೂ ನಮ್ಮ ಕಮಿಷನರ್ ಕಾರ್ಯಕ್ರಮದ ಭದ್ರತೆ ಬಗ್ಗೆ ಚರ್ಚಿಸಿದ್ದಾರೆ ಎಂದು ಈರೇಶ ಅಂಚಟಗೇರಿ ತಿಳಿಸಿದರು.
ರಾಷ್ಟ್ರಪತಿಗಳಿಗೆ ಸನ್ಮಾನಿಸುವುದು ಹುಬ್ಬಳ್ಳಿ-ಧಾರವಾಡ ಮಹಾನಗರದ 12 ಲಕ್ಷ ನಾಗರಿಕರ ಬಹುದಿನಗಳ ಬೇಡಿಕೆ ಆಗಿತ್ತು. ನಮ್ಮ ಬೇಡಿಕೆಗೆ ಸ್ಪಂದಿಸಿ ರಾಷ್ಟ್ರಪತಿಗಳು ನಗರಕ್ಕೆ ಬರುತ್ತಿದ್ದಾರೆ. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಸ್ತುವಾರಿ ಸಚಿವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲಾ ನಗರದ ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ಮುಂತಾದ ಗಣ್ಯರು ಆಹ್ವಾನ ನೀಡಲಾಗಿದೆ. ಈಗಾಗಲೇ 5000 ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ಕೆಲಸ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ 6 ಮಂದಿ
ಪೌರ ಸನ್ಮಾನ ಸಮಾರಂಭದ ವೇದಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧಾರವಾಡದ ಐಐಐಟಿ ಆಡಳಿತ ಮಂಡಳಿಯ ಚೇರ್ಮನ್ ಸುಧಾಮೂರ್ತಿ ಹಾಗೂ ಮತ್ತೊಬ್ಬ ಪ್ರಮುಖ ಅತಿಥಿ ಸೇರಿದಂತೆ ಒಟ್ಟು 6 ಮಂದಿಗೆ ಆಸನ ಕಾಯ್ದಿರಿಸಲಾಗಿದೆ. ರಾಷ್ಟ್ರಪತಿಯ ಬಲಭಾಗದಲ್ಲಿ ರಾಜ್ಯಪಾಲರು ಹಾಗೂ ಎಡಭಾಗದಲ್ಲಿ ಮುಖ್ಯಮಂತ್ರಿ ಆಸೀನರಾಗಲಿದ್ದಾರೆ. ವೇದಿಕೆ ಮುಂಭಾಗದ ಆಸನಗಳ ಮೊದಲ ಸಾಲಿನಲ್ಲಿ ರಾಷ್ಟ್ರಪತಿ ಅವರ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ವೈದ್ಯ, ಕರ್ತವ್ಯನಿರತ ವಿಶೇಷಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಇರಲಿದ್ದಾರೆ.
ಹುಬ್ಬಳ್ಳಿಗೆ
ಆಗಮಿಸುತ್ತಿರುವ
ಐದನೇ
ರಾಷ್ಟ್ರಪತಿ
ದ್ರೌಪದಿ
ಮುರ್ಮು
ಅವರು
ಧಾರವಾಡ
ಜಿಲ್ಲೇಗೆ
ಭೇಟಿ
ನೀಡುತ್ತಿರುವ
ಐದನೇ
ರಾಷ್ಟ್ರಪತಿ.
ಈ
ಮೊದಲು
ದೇಶದ
ಎರಡನೇ
ರಾಷ್ಟ್ರಪತಿ
ಸರ್ವಪಲ್ಲಿ
ರಾಧಾಕೃಷ್ಣನ್,
ಗ್ಯಾನಿ
ಜೇಲ್ಸಿಂಗ್,
ಡಾ.ಅಬ್ದುಲ್
ಕಲಾಂ,
ಪ್ರಣವ್
ಮುಖರ್ಜಿ
ಅವರು
ಆಗಮಿಸಿದ್ದರು.
ಇದೀಗ
ರಾಷ್ಟ್ರಪತಿ
ದ್ರೌಪದಿ
ಮುರ್ಮು
ಅವರು
ಆಗಮಿಸುತ್ತಿದ್ದಾರೆ.
ಅಂದು ರಾಷ್ಟ್ರಪತಿಗಳಿಗೆ ಸಿದ್ದಾರೋಢರ ಬೆಳ್ಳಿ ಪ್ರತಿಮೆ, ಪುಸ್ತಕ, ಧಾರವಾಡ ಪೇಡಾ ನೆನಪಿನ ಕಾಣಿಕೆಯಾಗಿ ನೀಡುತ್ತಿದ್ದೇವೆ. ಅಂದು ಎಲ್ಲಾ ಪಾಲಿಕೆಯ 81 ಸದಸ್ಯರೊಂದಿಗೆ ಫೋಟೋ ತೆಗೆದುಕೊಳ್ಳಲಾಗುವುದು ಎಂದು ಈರೇಶ ಅಂಚಟಗೇರಿ ತಿಳಿಸಿದರು.