ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನುಮಂತನಿಗೂ ಕೊರೊನಾ ಭೀತಿ; ಪೂಜೆಗೆ ಸಾಮಾಜಿಕ ಅಂತರ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 08 : ಕೊರೊನಾ ಹರಡದಂತೆ ತಡೆಯಲು ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಕೊರೊನಾ ಭೀತಿಯ ನಡುವೆ ಜನರು ಯುಗಾದಿ, ರಾಮನವಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಬುಧವಾರ ಹನುಮ ಜಯಂತಿ ಬಂದಿದೆ.

Recommended Video

ದಯವಿಟ್ಟು ನಿಯಮಗಳನ್ನು ಪಾಲಿಸಿ ಎಂದ ಸುಮಲತಾ | Sumalatha Ambareesh | oneindia kannada

ಹನುಮ ಜಯಂತಿದಿನದಂದು ಬಹಳ ಜನರು ಹನುಮಂತ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಲಾಕ್ ಡೌನ್ ಪರಿಣಾಮ ದೇವಾಲಯದ ಬಾಗಿಲು ಮುಚ್ಚಿದೆ. ಜನರು ಮನೆಯಿಂದ ಹೊರ ಬರುವಂತಿಲ್ಲ. ದೇವಾಲಯಕ್ಕೆ ಹೋಗುವುದು ದೂರದ ಮಾತು.

ವಿಡಿಯೋ: ಹನುಮ ದೇವರನ್ನು ಅಶುದ್ಧಗೊಳಿಸಿದರೇ ಕೇಜ್ರಿವಾಲ್?ವಿಡಿಯೋ: ಹನುಮ ದೇವರನ್ನು ಅಶುದ್ಧಗೊಳಿಸಿದರೇ ಕೇಜ್ರಿವಾಲ್?

ಕೊರೊನಾ ಹರಡದಂತೆ ತಡೆಯಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಜನರು ಅಗತ್ಯ ವಸ್ತುಗಳ ಖರೀದಿಗೆ ಹೋದಾಗ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹನುಮನ ಪೂಜೆಗೆ ಸಾಮಾಜಿಕ ಅಂತರ ಕಾಪಾಡಬೇಕಿದೆ.

ಹೊಸಕೆರೆಹಳ್ಳಿ, ಚಾಮರಾಜಪೇಟೆಯಲ್ಲಿ ಹನುಮ ಜಯಂತಿ ಸಂಭ್ರಮ ಹೊಸಕೆರೆಹಳ್ಳಿ, ಚಾಮರಾಜಪೇಟೆಯಲ್ಲಿ ಹನುಮ ಜಯಂತಿ ಸಂಭ್ರಮ

Hanuman Jayanti Social Distancing During Offering Prayers To Lord

ಹುಬ್ಬಳ್ಳಿಯಲ್ಲಿ ದೇವಾಲಯಗಳು ಬಾಗಿಲು ಹಾಕಿದೆ. ಆದ್ದರಿಂದ, ಹನುಮನ ಭಕ್ತರು ರಸ್ತೆಯ ಪಕ್ಕದಲ್ಲಿರುವ ಹನುಮನ ಚಿಕ್ಕ ಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಪೂಜೆ ಸಲ್ಲಿಸುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಫೋಟೋ ವೈರಲ್ ಆಗಿದೆ.

ಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಟ್ವೀಟ್ ಮಾಡಿ ದೇಶದ ಜನರಿಗೆ ಹನುಮ ಜಯಂತಿ ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕೀಯ ನಾಯಕರು ಹನುಮ ಜಯಂತಿ ಶುಭಾಶಯಗಳನ್ನು ತಿಳಿಸಲು ಟ್ವೀಟ್ ಮಾಡಿದ್ದಾರೆ.

English summary
In Hubballi Karnataka devotees maintain social distancing while offering prayers to lord Hanuman at a temple on the occasion of Hanuman Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X