ಹುಬ್ಬಳ್ಳಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ; ಪ್ರತಿಭಟಿಸಿದ ಮರಾಠಾ ಸಮುದಾಯ
ಹುಬ್ಬಳ್ಳಿ, ಮಾರ್ಚ್ 24: ಮಹಾನಗರ ಪಾಲಿಕೆ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿಯ ಪ್ರತಿಮೆ ಮಂಗಳವಾರ ಉರುಳಿದೆ. ಎರಡು ದಶಕಗಳ ಹೋರಾಟದ ನಂತರ 2019ರಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ, ಅದು ಇನ್ನೂ ಉದ್ಘಾಟನೆಗೊಂಡಿರಲಿಲ್ಲ. ಶಿವಾಜಿಯ ಪ್ರತಿಮೆ ಉರುಳಿರುವುದಕ್ಕೆ ಮರಾಠಾ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಘಟನೆ ವಿವಾದಕ್ಕೆ ಸಿಲುಕುವ ಮುನ್ನ, ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಲ್ ಮಾತನಾಡಿ, ಪ್ರತಿಮೆಯನ್ನು 100 ದಿನಗಳಲ್ಲಿ ಪುನಃ ಸ್ಥಾಪಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. 12.5 ಅಡಿ ಎತ್ತರದ, 8 ಅಡಿ ಅಗಲದ ಪ್ರತಿಮೆಯನ್ನು ಸುಮಾರು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತಾದರೂ, ಉದ್ಘಾಟನೆಯಾಗಿರಲಿಲ್ಲ.
Recommended Video
ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಎಸ್.ಸಿ ಬೆವೂರ್, ಈ ಘಟನೆಯ ಬಗ್ಗೆ ತನಿಖೆ ಕೋರಿ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದರು. ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಪ್ರತಿಭಟನಾಕಾರರನ್ನು ಸಂತೋಷಪಡಿಸುವಲ್ಲಿ ಇದು ಯಶಸ್ವಿಯಾಯಿತು.