ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ23ರ ನಂತರ ನರೇಂದ್ರ ಮೋದಿ 'ಮಹಾನ್ ಫೇಕು ಮಹಾರಾಜ್': ಬಿ ಕೆ ಹರಿಪ್ರಸಾದ್

|
Google Oneindia Kannada News

ಹುಬ್ಬಳ್ಳಿ, ಮೇ 14: ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಇನ್ನೂ ಆರದ ಬೆಂಕಿಯ ನಡುವೆ, ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸುವ ಕೆಲಸವನ್ನು ಕಾಂಗ್ರೆಸ್ಸಿನವರು ಮುಂದುವರಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೋದಿ ನೇಣುಗಂಬ ಏರಲು ಸಿದ್ದನಾ ಎಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಒಂದು ದಿನದ ಹಿಂದೆ ಹೇಳಿಕೆಯನ್ನು ನೀಡಿದ್ದರು. ಈಗ ಇನ್ನೋರ್ವ ಮುಖಂಡರ ಸರದಿ. ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್, ಮೋದಿ ವಿರುದ್ದ ಕಿಡಿಕಾರಿದ್ದಾರೆ.

ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!

ಮೊದಲು ತಾನು ಚಾಯ್ ವಾಲಾ ಎಂದರು, ನಂತರ ಚೌಕೀದಾರ್ ಅಂದರು, ಇಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ ಎಂದು ಹೇಳಿರುವ ಹರಿಪ್ರಸಾದ್, ಮೇ 23ರ ನಂತರ ನರೇಂದ್ರ ಮೋದಿಗೆ 'ಮಹಾನ್ ಫೇಕು ಮಹಾರಾಜ್' ಎನ್ನುವ ಹೆಸರು ಬರಲಿದೆ ಎಂದು ಲೇವಡಿ ಮಾಡಿದ್ದಾರೆ.

After May 23rd Modi name will change as Mahan Feku Maharaj

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ, ನಮ್ಮ ನಾಯಕ ರಾಹುಲ್ ಗಾಂಧಿ ಮತ್ತು ದೇವೇಗೌಡರು ಚರ್ಚಿಸಿ, ಸರಕಾರ ರಚಿಸುವ ನಿರ್ಧಾರಕ್ಕೆ ಬಂದಿದ್ದರು. ಯಾರೋ ಹೇಳಿಕೆ ಕೊಟ್ಟ ಮಾತ್ರಕ್ಕೆ ಕುಮಾರಸ್ವಾಮಿ ಸರಕಾರಕ್ಕೆ ತೊಂದರೆ ಏನೂ ಆಗುವುದಿಲ್ಲ ಎಂದು ಪರೋಕ್ಷವಾಗಿ, ಎಚ್ ವಿಶ್ವನಾಥ್ ಅವರಿಗೆ ಬಿ ಕೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.

ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!? ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!?

ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ವಿ ಆರ್ ಸುದರ್ಶನ್ ನೇತೃತ್ವದ ಸಮಿತಿ ಕ್ರಮ ತೆಗೆದುಕೊಳ್ಳಲಿದೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

English summary
After May 23rd Narendra Modi name will change as Mahan Feku Maharaj, Bengaluru South Congress candidate B K Hariprasad statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X