ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿಗೆ ಹಾರಿದ ನಾಲ್ವರು ನಿಲ್ಲಿಸಿ ಬಿಟ್ಟರಲ್ಲ ಉಸಿರಾಟ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್ 11: ಅವರೆಲ್ಲಾ ಆತ್ಮೀಯ ಸ್ನೇಹಿತರು ಎಲ್ಲರು ಸೇರಿಕೊಂಡು ಕೆರೆಯಲ್ಲಿ ಈಜಲು ಹೋಗಿದ್ದರು, ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಏಳು ಜನ ಸ್ನೇಹಿತ ಕೆರೆಗೆ ಈಜಲು ಹೋದ್ರೆ ವಾಪಸ್ ಬಂದಿದ್ದು ಮಾತ್ರ ಮೂರೇ ಜನ.

ನೀರಿನಲ್ಲಿ ಹಾಯಾಗಿ ಈಜಲು ಹೋಗಿದ್ದ ಯುವಕರು ಇಂದು ಜವರಾಯನ ಪಾದ ಸೇರಿದ್ದಾರೆ. ಏಳರಲ್ಲಿ ಮೂರು ಮಂದಿ ಬಚಾವ್ ಆಗಿ ಬಂದರೆ, ಉಳಿದ ನಾಲ್ಕು ಯುವಕರು ನೀರುಪಾಲಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಧೂಳೋ ಧೂಳು; ರಸ್ತೆ ಕಥೆ ಕೇಳೋರು ಯಾರು?ಹುಬ್ಬಳ್ಳಿಯಲ್ಲಿ ಧೂಳೋ ಧೂಳು; ರಸ್ತೆ ಕಥೆ ಕೇಳೋರು ಯಾರು?

ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದಲ್ಲಿ ಇಂಥದೊಂದು ಮನಕಲುಕುವಂಥಾ ಘಟನೆ ನಡೆದಿದೆ. ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

4 members drowned in hubli

ಸ್ನೇಹಿತರೇ ಸ್ನೇಹಿತರನ್ನು ಬದುಕಿಸಲಾಗಲಿಲ್ಲ: ಎಲ್ಲ ವಿಧಿಯಾಟ!

ಹುಬ್ಬಳ್ಳಿಯ ಮಚ್ಚಿ ಮಾರ್ಕೆಟ್ ನಿವಾಸಿಗಳಾದ 18 ವರ್ಷದ ಜುನೈದ್, ಸುಭಾನಿ, ಐಯಾನ್, ಸುಭಾನಿ ಮೃತರು ಎಂದು ಗುರುತಿಸಲಾಗಿದೆ. ನೀರು ಪಾಲಾದ ಸ್ನೇಹಿತರನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನ ಮಾಡಿದರು ಅದು ಫಲಕಾರಿಯಾಗಿಲ್ಲ ಎಂದು ಜೊತೆಗಿದ್ದವರು ಗೋಳಿಟ್ಟಿದ್ದಾರೆ.

4 members drowned in hubli

ಸ್ಥಳೀಯರು ಅಗ್ನಿ ಶಾಮಕ ದಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮನಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

English summary
Four members drowned and died in hubballi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X