ಸಂಪುಟದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ?: ಬಿ ಸಿ ಪಾಟೀಲ್ ಸ್ಪಷ್ಟನೆ
ಹಾವೇರಿ,
ಮಾರ್ಚ್.06:
ತಮ್ಮ
ವಿರುದ್ಧ
ಯಾವುದೇ
ರೀತಿ
ಅವಹೇಳನಕಾರಿ
ಮತ್ತು
ಮಾನಹಾನಿಗೆ
ಸಂಬಂಧಿಸಿದಂತೆ
ಯಾವುದೇ
ವರದಿ
ಪ್ರಸಾರ
ಮಾಡದಂತೆ
ಕೋರ್ಟ್
ಮೊರೆ
ಹೋಗಿರುವ
ಬಗ್ಗೆ
ಕೃಷಿ
ಸಚಿವ
ಬಿ.ಸಿ.
ಪಾಟೀಲ್
ಸ್ಪಷ್ಟನೆ
ನೀಡಿದ್ದಾರೆ.
"ಒಬ್ಬ
ರೈತನ
ಮಗನಾಗಿ
ಯಾವುದೇ
ಗಾಡ್
ಫಾದರ್
ಇಲ್ಲದೇ
ಇಷ್ಟರ
ಮಟ್ಟಕ್ಕೆ
ಬೆಳೆದು
ಬಂದಿದ್ದು
ಬಹಳಷ್ಟು
ಜನರಿಗೆ
ಸಹಿಸಲು
ಆಗುವುದಿಲ್ಲ.
ಆದರೆ
ಯಾವುದೋ
ಕುತಂತ್ರಿಗಳ
ರಾಜಕೀಯ
ಷಡ್ಯಂತ್ರಕ್ಕೆ
ನಮ್ಮ
ಹೆಸರನ್ನು
ವಿನಾಕಾರಣ
ಸತ್ಯಾಸತ್ಯತೆ
ಅರಿಯದೆ
ನಮ್ಮ
ತೇಜೋವಧೆ
ಆಗಬಾರದು
ಎಂಬ
ದೃಷ್ಟಿಯಲ್ಲಿ,
ಮುನ್ನೆಚ್ಚರಿಕೆಯ
ಕ್ರಮವಾಗಿ
ಕಾನೂನಿನ
ಮೊರೆ
ಹೋಗಿದ್ದೇವೆ"
ಎಂದು
ಸಚಿವ
ಬಿ
ಸಿ
ಪಾಟೀಲ್
ಟ್ವೀಟ್
ಮಾಡಿದ್ದಾರೆ.
ಜಾರಕಿಹೊಳಿ
ಸಿಡಿ
ಸ್ಪೋಟವಾಗುತ್ತಿದ್ದಂತೆ
ಕೋರ್ಟ್
ಮೊರೆ
ಹೋದ
ಆರು
ಸಚಿವರು!
"ಆದ್ದರಿಂದಲೇ
ನಾವೆಲ್ಲರೂ
ನಮ್ಮ
ವಿರುದ್ಧ
ಸತ್ಯಾಸತ್ಯತೆ
ಅರಿಯದೆ
ನಮ್ಮ
ವಿರುದ್ಧ
ಪ್ರಸಾರ
ವಾಗಬಾರದು
ಎಂದು
ಕೋರ್ಟಿಗೆ
ತಡೆಯಾಜ್ಞೆ
ಅರ್ಜಿ
ಸಲ್ಲಿಸಿದ್ದೇವೆ.
ಸತ್ಯಮೇವ
ಜಯತೆ"
ಎಂದು
ತಮ್ಮ
ಟ್ವಿಟರ್
ಖಾತೆಯಲ್ಲಿ
ಸಚಿವ
ಬಿ
ಸಿ
ಪಾಟೀಲ್
ಬರೆದುಕೊಂಡಿದ್ದಾರೆ.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ:
Recommended Video
ಒಬ್ಬ ರೈತನ ಮಗನಾಗಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಷ್ಟರ ಮಟ್ಟಕ್ಕೆ ಬೆಳೆದುಬಂದಿದ್ದು ಬಹಳಷ್ಟು ಜನರಿಗೆ ಸಹಿಸಲು ಆಗುವುದಿಲ್ಲ. ಆದರೆ ಯಾವುದೋ ಕುತಂತ್ರಿಗಳ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹೆಸರನ್ನು ವಿನಾಕಾರಣ ಸತ್ಯಾಸತ್ಯತೆ ಅರಿಯದೆ ನಮ್ಮ ತೇಜವಧೆ ಆಗಬಾರದು ಎಂಬ ದೃಷ್ಟಿಯಲ್ಲಿ , ಮುನ್ನೆಚ್ಚರಿಕೆಯ ಕ್ರಮವಾಗಿ ಕಾನೂನಿನ ಮೊರೆ ಹೋಗಿದ್ದೇವೆ.
— Kourava B.C.Patil (@bcpatilkourava) March 6, 2021
ಕರ್ನಾಟಕ ರಾಜ್ಯ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಮತ್ತು ಮಾನಹಾನಿಯ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವ ಡಾ. ಕೆ. ಸುಧಾಕರ್, ಬಿ ಸಿ ಪಾಟೀಲ್, ಶಿವರಾಜ್ ಹೆಬ್ಬಾರ್, ಡಾ. ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಚಿವರು ಸಲ್ಲಿಸಿದ ಅರ್ಜಿ ಶನಿವಾರ ವಿಚಾರಣೆಗೆ ಬರಲಿದೆ.