ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿಯಲ್ಲಿ ಮಳೆಗಾಗಿ ದೇವರಿಗೆ ಹೋಳಿಗೆ ಪೂಜೆ!

By Gururaj
|
Google Oneindia Kannada News

ಹಾವೇರಿ, ಜುಲೈ 16 : ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ವಿವಿಧ ಜಲಾಶಯಗಳು ಭರ್ತಿಯಾಗಿವೆ. ಆದರೆ, ಹಾವೇರಿಯಲ್ಲಿ ಮಳೆಗಾಗಿ ದೇವರಿಗೆ ಹೋಳಿಗೆ ಪೂಜೆ ಮಾಡಲಾಗಿದೆ.

ಹಾವೇರಿ ನಗರದ ಪ್ಯಾಟಿ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರ ದೇವರಿಗೆ ಸೋಮವಾರ ಹೋಳಿಗೆ ಪೂಜೆ ನಡೆಯಿತು. ಮಳೆ ಬಾರದೇ ಇದ್ದಾಗ ಬಸವೇಶ್ವರ ದೇವರಿಗೆ ಹೋಳಿಗೆ ಪೂಜೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.

ಚಿತ್ರಗಳು : ಕೊಡಗಿನ ಚಿಕ್ಲಿಹೊಳೆಯಲ್ಲೀಗ ಜಲವೈಭವ!ಚಿತ್ರಗಳು : ಕೊಡಗಿನ ಚಿಕ್ಲಿಹೊಳೆಯಲ್ಲೀಗ ಜಲವೈಭವ!

ಬಸವೇಶ್ವರ ದೇವರ ಮೂರ್ತಿಯನ್ನು 150 ಹೋಳಿಗೆಗಳಿಂದ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು. 25 ಕೆಜಿ ಬೆಲ್ಲ, 15 ಕೆಜಿ ಮೈದಾ ಹಿಟ್ಟು, 15 ಕೆಜಿ ಕಡಲೆ ಬೇಳೆಯಿಂದ ಹೋಳಿಗೆ ತಯಾರು ಮಾಡಲಾಗಿತ್ತು.

rain

ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಮಳೆಯಾಗಿಲ್ಲ. ವ್ಯವಸಾಯವನ್ನು ನಂಬಿರುವ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ರಾಜ್ಯದ ಬೇರೆ-ಬೇರೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೆ, ಹಾವೇರಿ ಜನರು ವರುಣನ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.

45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!

ಮಳೆಯಾಗದಿದ್ದಾಗ ಪ್ಯಾಟಿ ಬಸವೇಶ್ವರ ದೇವಾಲಯದಲ್ಲಿ ಹೋಳಿಗೆ ಪೂಜೆ ಮಾಡಿದರೆ ಮಳೆಯಾಗಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ, ಜನರು ಇಂದು ಪೂಜೆ ನಡೆಸಿದ್ದಾರೆ.

English summary
People of Haveri performed special Holige poja for Pyati Basaveshwara for rain. Various district of Karnataka in the threat of flood after heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X