ಕೃಷಿ ಸಚಿವರ ಮಗಳು ಹುಟ್ಟುಹಬ್ಬದ ದಿನ ಮಾಡಿದ್ದೇನು?
ಹಾವೇರಿ, ಏಪ್ರಿಲ್ 05: ಕೃಷಿ ಸಚಿವ, ಹಿರೇಕೆರೂರು ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ ಬಿ.ಸಿ ಪಾಟೀಲ್ ಮಗಳು ಸೃಷ್ಠಿ ಪಾಟೀಲ್ ಅವರು ತಮ್ಮ ಹುಟ್ಟುಹಬ್ಬವನ್ನು ಇಂದು ಸರಳವಾಗಿ ಆಚರಿಸಿಕೊಂಡರು.
ಸದ್ಯ ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿ ರೋಗದಿಂದ ದೇಶವು ನಲುಗುತ್ತಿದ್ದು, ಇಂತಹ ಸಮಯದಲ್ಲಿ ಸೃಷ್ಠಿ ತಮ್ಮ ಬರ್ತ ಡೇ ಯನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾದರು.
ರಾಜ್ಯದಲ್ಲಿ ಇನ್ನೂ ಲಾಕ್ ಡೌನ್ ಮುಂದುವರೆದಿದೆ. ಕೊರೊನಾ ವೈರಸ್ ವಿರುದ್ಧ ಯೋಧರಂತೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ ಊಟದ ವ್ಯವಸ್ಥೆ ಮಾಡಿ, ಸೃಷ್ಠಿ ಪಾಟೀಲ್ ತಮ್ಮ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಸಚಿವರ ಮಗಳಾದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಸರಳವಾಗಿ ಜನರ ಜೊತೆ ಇದ್ದರು. ಹಿರೇಕೆರೂರಿನ ರಟ್ಟಹಳ್ಳಿಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೂ ಊಟದ ವ್ಯವಸ್ಥೆ ಜೊತೆಗೆ ಮಾಸ್ಕ್ ಗಳನ್ನು ವಿತರಿಸಿದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.