ಹಾನಗಲ್; ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ ಸಿದ್ದರಾಮಯ್ಯ
ಹಾವೇರಿ, ಅಕ್ಟೋಬರ್ 22; "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ? ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಶುಕ್ರವಾರ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾನಗಲ್ ವಿಧಾನಸಭೆ ಕ್ಷೇತ್ರದ ನರೇಗಲ್ನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರವಾಗಿ ಪ್ರಚಾರ ನಡೆಸಿದರು.
ಆರ್ಎಸ್ಎಸ್ ಕಂಡರೆ ನನಗ್ಯಾಕೆ ಭಯ?; ಸಿದ್ದರಾಮಯ್ಯ
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ? ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ. ನನ್ನ ಅಧಿಕಾರಾವಧಿಯಲ್ಲಿ ಎಷ್ಟು ಕೆಲಸ ಆಗಿದೆ ಎಂಬುದರ ಲೆಕ್ಕ ನಾನು ಕೊಡ್ತೀನಿ, ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದರ ಲೆಕ್ಕ ನೀವು ಕೊಡಿ. ಜನರಿಗೆ ಸತ್ಯ ಗೊತ್ತಾಗಲಿ" ಎಂದು ಸವಾಲು ಹಾಕಿದರು.
ಹಾನಗಲ್; ಬಿಜೆಪಿ ಬಂಡಾಯ ಶಮನ, ನಾಮಪತ್ರ ವಾಪಸ್
"ಕಳೆದ ಚುನಾವಣೆಯಲ್ಲಿ ಸೋತಿದ್ದರು ಕೂಡ ಕ್ಷೇತ್ರದಿಂದ ದೂರಾಗದೆ ಕೊರೊನಾ ಸಂದರ್ಭದಲ್ಲಿ ಜನರ ಜೊತೆಗಿದ್ದು, ಅಗತ್ಯ ರೀತಿಯ ನೆರವು ನೀಡಿದ ಶ್ರೀನಿವಾಸ್ ಮಾನೆ ಅವರಿಗೆ ಮತ ನೀಡಬೇಕು ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತೇನೆ" ಎಂದು ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.
ಡಿಕೆ ಶಿವಕುಮಾರ್ ನಿಜ ಬಣ್ಣ ಬಯಲಾಗಿದೆ, ಸೂಕ್ತ ತನಿಖೆಯಾಗಲಿ: ಎಎಪಿ
ಮರೆತುಬಿಟ್ರಾ ಶಿವರಾಜ್ ಸಜ್ಜನರ?
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಡಾ. ಚಿತ್ತರಂಜನ್ ಕಲಕೋಟಿಯವರು ಅಧ್ಯಕ್ಷರಾಗಿದ್ದ ವೇಳೆ ರೂ. 6 ಕೋಟಿ ಲಾಭದಲ್ಲಿದ್ದ ಸಂಗೂರು ಸಕ್ಕರೆ ಕಾರ್ಖಾನೆ, ಉದಾಸಿ ಮತ್ತು ಶಿವರಾಜ್ ಸಜ್ಜನರ ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡ ನಂತರ ನಷ್ಟದ ಹಾದಿಗೆ ಹೋಗಿದ್ದು ಏಕೆ? ಎಂಬುದನ್ನು ಸಜ್ಜನರ ಹೇಳಲಿ. ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ಸಂಬಂಧ 1959ರ ಸಹಕಾರಿ ಕಾಯ್ದೆಯಡಿ ತನಿಖೆ ನಡೆದು, ಲೂಟಿ ಮಾಡಿದ 33 ಲಕ್ಷ ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಮರೆತುಬಿಟ್ಟರಾ ಶಿವರಾಜ್ ಸಜ್ಜನರ?" ಎಂದು ಪ್ರಶ್ನೆ ಮಾಡಿದರು.
ತಕ್ಕ ಪಾಠ ಕಲಿಸಬೇಕು
"ಸಂಗೂರು ಸಕ್ಕರೆ ಕಾರ್ಖಾನೆ, ಗೌರಾಪುರ ಗುಡ್ಡದ 21 ಎಕರೆ ಭೂಮಿಯನ್ನು ನುಂಗಿ ನೀರುಕುಡಿದ ಶಿವರಾಜ್ ಸಜ್ಜನರ ಒಬ್ಬ ಸಜ್ಜನನೋ? ದುರ್ಜನನೋ? ಇಂಥವರು ಗೆದ್ದರೆ ಕ್ಷೇತ್ರದ ಅನುದಾನ ಸದ್ಬಳಕೆಯಾಗಲು ಸಾಧ್ಯವೇ? ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವೇ?. ಕಾರ್ಖಾನೆಯ ಖಾಲಿ ಚೀಲಗಳನ್ನು ಬಿಡದೆ ಸಜ್ಜನರ ಲೂಟಿ ಮಾಡಿದ್ದಾರೆ. ಹಾಗಾಗಿ ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದೆ, ಅವರ ಮತ ಪೆಟ್ಟಿಗೆಯನ್ನು ಖಾಲಿ ಡಬ್ಬಗಳನ್ನಾಗಿ ಕಳುಹಿಸಿಕೊಡುವ ಮೂಲಕ ತಕ್ಕ ಪಾಠ ಕಲಿಸಬೇಕು" ಎಂದು ಸಿದ್ದರಾಮಯ್ಯ ಕರೆ ನೀಡಿದರು.
ನಿಮ್ಮಿಂದ ಆಗಿಲ್ಲ ಬೊಮ್ಮಾಯಿ ಅವರೇ!
ಸಿದ್ದರಾಮಯ್ಯ ಮಾತನಾಡಿ, "ನನ್ನ ಅಧಿಕಾರಾವಧಿಯಲ್ಲಿ ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ರೂ. 2,400 ಕೋಟಿ ಅನುದಾನ ನೀಡಿದ್ದೆ. 2018 ರಲ್ಲಿ ಬಂದ ಪ್ರವಾಹದಿಂದಾಗಿ ಕಂಚಿನೆಗಳೂರು ಗ್ರಾಮದ ಒಡ್ಡು ಒಡೆದುಹೋಗಿ ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3 ವರ್ಷ ಕಳೆದರೂ ಒಂದು ಒಡ್ಡು ಸರಿಪಡಿಸಲು ನಿಮ್ಮಿಂದ ಆಗಿಲ್ವಲ್ರೀ ಬೊಮ್ಮಾಯಿ ಅವರೇ?" ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
"ಅಚ್ಚೇ
ದಿನ್
ಬರುತ್ತೆ
ಎಂದು
ಮೋದಿ
ಹೇಳಿದರು,
ಅವರು
ಅಧಿಕಾರಕ್ಕೆ
ಬಂದು
ಏಳು
ವರ್ಷ
ಆಯ್ತಲ್ಲಾ
ನಿಮಗೆಲ್ಲಾ
ಅಚ್ಚೇ
ದಿನ
ಬಂತಾ?.
ಈಗ
ಪೆಟ್ರೋಲ್
ಬೆಲೆ
110,
ಡೀಸೆಲ್
ಬೆಲೆ
100,
ಗ್ಯಾಸ್
ಬೆಲೆ
950
ರೂಪಾಯಿ
ಆಗಿದೆ.
ಕೇಂದ್ರ
ಮತ್ತು
ರಾಜ್ಯ
ಸರ್ಕಾರ
ಎದ್ವಾತದ್ವಾ
ತೆರಿಗೆ
ಹೆಚ್ಚಳ
ಮಾಡಿರುವ
ಕಾರಣ
ಇವುಗಳ
ಬೆಲೆ
ಗಗನಕ್ಕೇರಿದೆ.
ಒಂದು
ಲೀಟರ್
ಪೆಟ್ರೋಲ್ನ
ನೈಜ
ಬೆಲೆ
45
ರೂಪಾಯಿ,
ಉಳಿದ
60
ರೂಪಾಯಿ
ಕೇಂದ್ರ
ಮತ್ತು
ರಾಜ್ಯ
ಸರ್ಕಾರದ
ತೆರಿಗೆ.
ಇದೇನಾ
ಅಚ್ಚೇ
ದಿನ?
ವರ್ಷಕ್ಕೆ
ಎರಡು
ಕೋಟಿ
ಉದ್ಯೋಗ
ಸೃಷ್ಟಿ
ಮಾಡ್ತೀವಿ
ಎಂದು
ಯುವಕರಿಗೆ
ಮೋದಿ
ಭರವಸೆ
ನೀಡಿದ್ದರು,
ಪಾಪ
ಯುವಕರು
ನಂಬಿ
ಓಟು
ಹಾಕಿ
ಗೆಲ್ಲಿಸಿದರು,
ಈಗ
ಹನ್ನೆರಡು
ಕೋಟಿ
ಉದ್ಯೋಗ
ಕಿತ್ತುಕೊಂಡು
ಹೋಗಿದೆ.
ಮೊದಲು
ಮೋದಿ
ಮೋದಿ
ಎಂದು
ಕೂಗುತ್ತಿದ್ದವರೇ
ಇಂದು
ಮೋದಿ
ಹೆಸರು
ಕೇಳಿದರೆ
ಶಾಪ
ಹಾಕುತ್ತಿದ್ದಾರೆ"
ಎಂದು
ಆರೋಪಿಸಿದರು.
ಮೋದಿ ಕಂಡರೆ ಅವರಿಗೆ ಭಯ
"14ನೇ ಹಣಕಾಸು ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38,000 ಕೋಟಿ ರೂಪಾಯಿ ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ. 40,000 ಕೋಟಿ ನಷ್ಟವಾಗ್ತಿದೆ. ರಾಜ್ಯ ಬಿಜೆಪಿ ನಾಯಕರು ಇದರ ಬಗ್ಗೆ ಒಮ್ಮೆಯಾದರೂ ಬಾಯಿಬಿಟ್ಟು ಮಾತನಾಡಿದ್ದಾರಾ? ಮೋದಿ ಕಂಡರೆ ಭಯ ಅವರಿಗೆ" ಎಂದು ಸಿದ್ದರಾಮಯ್ಯ ಆರೋಪಿಸಿದರು.
Recommended Video
ಅವರಿಗೆ ಓಟು ಹಾಕಲೇಬಾರದು
"ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು, ಈಗಿನ ಸರ್ಕಾರ ಒಂದೇ ಒಂದು ಮನೆ ಕಟ್ಟಿ ಕೊಟ್ಟ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ನಾನು ರಾಜಕೀಯವನ್ನೇ ಬಿಟ್ಟು ಬಿಟ್ಟು ಬಿಡುವೆ. ನಾವು ಕೊಟ್ಟಿದ್ದ ಕೆಲವು ಮನೆಗಳಿಗೆ ಹಣ ಬಿಡುಗಡೆ ಮಾಡದೆ ಲಾಕ್ ಮಾಡಿದ್ದಾರೆ. ಅದಕ್ಕೆ ನೀವು ಅವರ ಮತಗಳನ್ನೇ ಲಾಕ್ ಮಾಡಬೇಕು ಅಂದರೆ ಅವರಿಗೆ ಓಟು ಹಾಕಲೇ ಬಾರದು" ಎಂದು ಸಿದ್ದರಾಮಯ್ಯ ಕರೆ ನೀಡಿದರು.
"ನಮ್ಮ ಸರ್ಕಾರ ಜಾರಿ ಮಾಡಿದ್ದ ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ನಮ್ಮ ಸರ್ಕಾರ ಹಲವು ಯೋಜನೆಗಳು ಇಂದು ಸ್ಥಗಿತಗೊಂಡಿವೆ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದಾರೆ. ಅನುಗ್ರಹ ಯೋಜನೆ ನಿಲ್ಲಿಸಿ ಬಡ ರೈತರು, ಹೈನುಗಾರರ ಹೊಟ್ಟೆಮೇಲೆ ಹೊಡಿದಿದ್ದಾರೆ" ಎಂದು ದೂರಿದರು.
"ಕೊರೊನಾ ಹೆಚ್ಚಿರೋದರಿಂದ ಲಾಕ್ ಡೌನ್ ಇದೆ. ಜನರಿಗೆ ದುಡಿಮೆ ಇಲ್ಲ, ಹೊಟ್ಟೆಪಾಡಿಗೂ ಕಷ್ಟ ಆಗಿದೆ ಉಚಿತವಾಗಿ ಹತ್ತು ಕೆಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಹೇಳಿದೆ. ಅದಕ್ಕೆ ಬಿಜೆಪಿ ಸರ್ಕಾರ ತನ್ನ ಬಳಿ ಹಣವಿಲ್ಲ ಅಂದಿತು. ನಾವೇ 2023 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಪ್ರತೀ ಬಡವರಿಗೆ ಉಚಿತವಾಗಿ ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ" ಎಂದರು.