ಸಿ.ಎಂ ಉದಾಸಿ ನಿಧನಕ್ಕೆ ಸಿಎಂ ಸೇರಿದಂತೆ ರಾಜಕೀಯ ನಾಯಕರ ಸಂತಾಪ
ಹಾವೇರಿ, ಜೂನ್ 8: ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಶಾಸಕ ಸಿ.ಎಂ ಉದಾಸಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.
"ಸಿ.ಎಂ ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು, ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ.''
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ
ಕೆ.ಎಸ್
ಈಶ್ವರಪ್ಪ
ಸಂತಾಪ
"ಮಾಜಿ
ಸಚಿವರು,
ಹಾನಗಲ್
ಕ್ಷೇತ್ರದ
ಹಾಲಿ
ಶಾಸಕರೂ
ಆಗಿರುವ
ರಾಜಕೀಯ
ಮುತ್ಸದ್ದಿಯಾಗಿದ್ದ
ಸಿ.ಎಂ
ಉದಾಸಿಯವರು
ಇಂದು
ನಮ್ಮನ್ನೆಲ್ಲ
ಅಗಲಿದ
ಸುದ್ದಿ
ತಿಳಿದು
ತೀವ್ರ
ದುಃಖವಾಯಿತು."
"ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ, ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿಸಿಎಂ
ಗೋವಿಂದ
ಕಾರಜೋಳ
ತೀವ್ರ
ಸಂತಾಪ
ಹಿರಿಯ
ಶಾಸಕರು
ಹಾಗೂ
ಮಾಜಿ
ಸಚಿವ
ಸಿ.ಎಂ
ಉದಾಸಿ
ಅವರ
ನಿಧನಕ್ಕೆ
ಉಪ
ಮುಖ್ಯಮಂತ್ರಿ
ಗೋವಿಂದ
ಎಂ.ಕಾರಜೋಳ
ತೀವ್ರ
ಶೋಕ
ವ್ಯಕ್ತಪಡಿಸಿದ್ದಾರೆ.
"ಸಿ.ಎಂ ಉದಾಸಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಕ್ರಿಯಾಶೀಲ ರಾಜಕಾರಣಿ. ಈ ಹಿಂದೆ ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾದ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು, ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ಸಜ್ಜನಿಕೆಯ ನೇತಾರರೊಬ್ಬರನ್ನು ರಾಜ್ಯ ಕಳೆದುಕೊಂಡಂತಾಗಿದೆ."
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬದವರಿಗೆ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಡಿಸಿಎಂ ಗೋವಿಂದ ಎಂ.ಕಾರಜೋಳ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಭಾವುಕರಾಗಿ
ಕಣ್ಣೀರು
ಹಾಕಿದ
ಗೃಹ
ಸಚಿವ
ಹಾವೇರಿ
ಜಿಲ್ಲೆ
ಹಾನಗಲ್ಗೆ
ಇಂದು
ಭೇಟಿ
ನೀಡಿದ
ಸಂದರ್ಭದಲ್ಲಿ
ಗೃಹ
ಸಚಿವ
ಬಸವರಾಜ
ಬೊಮ್ಮಾಯಿ
ಭಾವುಕರಾಗಿ
ಕಣ್ಣೀರು
ಹಾಕಿದರು.
ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಶಾಸಕರಾಗಿದ್ದ ರಾಜ್ಯ ಬಿಜೆಪಿಯ ಹಿರಿಯ ಮುಖಂಡರಾದ ಸಿ.ಎಂ ಉದಾಸಿ ನಿಧನಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ.
"ಸಿ.ಎಂ ಉದಾಸಿ ಅವರು ರಾಜ್ಯ ರಾಜಕಾರಣದ ಹಿರಿಯ ನಾಯಕರು. ಅವರಿಗೆ ಆಡಳಿತದಲ್ಲಿ ಅಪಾರ ಅನುಭವ ಇತ್ತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹತ್ತಿರದವರಾಗಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಲೋಕೋಪಯೋಗಿ ಖಾತೆಗಳನ್ನು ಉದಾಸಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಉದಾಸಿ ಅವರು ಏಳು ಭಾಷೆಗಳನ್ನು ಬಲ್ಲ ಧೀಮಂತ ನಾಯಕ. ಅಂಥ ಮುತ್ಸದ್ದಿ ನಾಯಕನನ್ನು ಕಳೆದುಕೊಂಡು ರಾಜ್ಯ ಈಗ ಬಡವಾಗಿದೆ. ಇದರಿಂದ ಕರ್ನಾಟಕ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಲಾರದ ಹಾನಿಯಾಗಿದೆ" ಎಂದು ಸಚಿವ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
"ವೈಯಕ್ತಿಕವಾಗಿ ಸಿಎಂ ಉದಾಸಿ ನನಗೆ ಗುರುಗಳು ಹಾಗೂ ಮಾರ್ಗದರ್ಶಕರು. ಅಂಥವರನ್ನು ಕಳೆದುಕೊಂಡಿರುವುದಕ್ಕೆ ನನಗೆ ಬಹಳ ದುಃಖವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ
ಶಿವಕುಮಾರ್
ಶೋಕ
ಸಂದೇಶ
ಮಾಜಿ
ಸಚಿವ,
ಬಿಜೆಪಿ
ಹಿರಿಯ
ಶಾಸಕ
ಸಿ.ಎಂ
ಉದಾಸಿ
ಅವರ
ನಿಧನಕ್ಕೆ
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ
ಶಿವಕುಮಾರ್
ತೀವ್ರ
ಸಂತಾಪ
ಸೂಚಿಸಿದ್ದಾರೆ.
"ಸಿ.ಎಂ ಉದಾಸಿ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರೊಬ್ಬ ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಮಿತಭಾಷಿ ಹಾಗೂ ಸಾತ್ವಿಕ ಮನೋಭಾವದವರು.1983ರಲ್ಲಿ ಶಾಸನಸಭೆ ಪ್ರವೇಶಿಸಿದ ಅವರು ಆರು ಬಾರಿ ಶಾಸಕರಾಗಿದ್ದರು. ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನಸೇವೆಗೆ ಸದಾ ತುಡಿಯುತ್ತಿದ್ದ ಅವರು ಕಿರಿಯರಿಗೆ ಮಾರ್ಗದರ್ಶಕರು, ಮಾದರಿಯೂ ಆಗಿದ್ದರು."
"ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧು-ಬಳಗವರು, ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಡಿ.ಕೆ ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಿ.ಎಂ
ಉದಾಸಿ
ನಿಧನಕ್ಕೆ
ಬಿಜೆಪಿ
ರಾಜ್ಯಾಧ್ಯಕ್ಷ
ಸಂತಾಪ
ಬಿಜೆಪಿಯ
ಹಿರಿಯ
ಶಾಸಕ
ಮತ್ತು
ಮಾಜಿ
ಸಚಿವ
ಸಿ.ಎಂ
ಉದಾಸಿ
ನಿಧನಕ್ಕೆ
ಬಿಜೆಪಿ
ರಾಜ್ಯಾಧ್ಯಕ್ಷ
ಮತ್ತು
ಸಂಸದ
ನಳಿನ್ಕುಮಾರ್
ಕಟೀಲ್
ಅವರು
ತೀವ್ರ
ಸಂತಾಪ
ಸೂಚಿಸಿದ್ದಾರೆ.
ಅವರ
ನಿಧನದಿಂದ
ಅಪರೂಪದ
ನೇತಾರರೊಬ್ಬರನ್ನು
ನಾಡು
ಕಳೆದುಕೊಂಡಂತಾಗಿದೆ
ಎಂದು
ತಿಳಿಸಿದ್ದಾರೆ.
"ಸಿ.ಎಂ ಉದಾಸಿ ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಅವರು ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು" ಎಂದು ನಳಿನ್ಕುಮಾರ್ ಕಟೀಲ್ ಸ್ಮರಿಸಿದ್ದಾರೆ.
"ಮೃತರ ಕುಟುಂಬ, ಬಂಧು- ಮಿತ್ರರಿಗೆ ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.
ಸಚಿವ
ಸಿ.ಸಿ
ಪಾಟೀಲ್
ತೀವ್ರ
ಶೋಕ
ಹಾವೇರಿ
ಜಿಲ್ಲೆಯ
ಹಾನಗಲ್
ವಿಧಾನಸಭಾ
ಕ್ಷೇತ್ರದ
ಹಾಲಿ
ಶಾಸಕರೂ
ಹಾಗೂ
ಲೋಕೋಪಯೋಗಿ
ಖಾತೆಯ
ಮಾಜಿ
ಸಚಿವರೂ
ಆದ
ಸಿ.ಎಂ
ಉದಾಸಿ
ನಿಧನಕ್ಕೆ
ಸಣ್ಣ
ಕೈಗಾರಿಕಾ
ಹಾಗೂ
ವಾರ್ತಾ
ಸಚಿವ
ಸಿ.ಸಿ
ಪಾಟೀಲ್
ತೀವ್ರ
ಶೋಕ
ವ್ಯಕ್ತಪಡಿಸಿದ್ದಾರೆ.
"ಸಿ.ಎಂ ಉದಾಸಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ವಿಶೇಷವಾಗಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಮತ್ತು ಸುಧಾರಣೆಗೆ ಕೈಗೊಂಡ ಕ್ರಮಗಳು ಅನುಕರಣೀಯ ಮತ್ತು ಅಭಿನಂದನೀಯ ಎಂಬ ಪ್ರಶಂಸೆಗಳ ಸುರಿಮಳೆಯನ್ನೇ ಗಳಿಸಿದ್ದರು" ಎಂದು ಸಿ.ಸಿ ಪಾಟೀಲ್ ಬಣ್ಣಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಾವೇರಿ ಜಿಲ್ಲೆಯಲ್ಲಿ ಅತ್ಯದ್ಬುತ ಕಟ್ಟಡವನ್ನು ನಿರ್ಮಿಸಿಕೊಟ್ಟ ಕೀರ್ತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಅವರಿಗೆ ಸಲ್ಲಬೇಕು ಎಂದೂ ಸಿ.ಸಿ ಪಾಟೀಲ್ ಹೇಳಿದ್ದಾರೆ.
"ಸಿ.ಎಂ ಉದಾಸಿ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರನ್ನೂ ಒಳಗೊಂಡಂತೆ, ಉದಾಸಿ ಅವರ ಕುಟುಂಬಕ್ಕೆ ಅವರ ಅಗಲಿಕೆಯಿಂದ ಉಂಟಾಗಿರುವ ಭರಿಸಲಾಗದ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ" ಎಂದು ಸಿ.ಸಿ ಪಾಟೀಲ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ
ಅರವಿಂದ
ಲಿಂಬಾವಳಿ
ತೀವ್ರ
ಶೋಕ
ಮಾಜಿ
ಸಚಿವ,
ಬಿಜೆಪಿಯ
ಹಿರಿಯ
ನಾಯಕ,
ಶಾಸಕ
ಸಿ.ಎಂ
ಉದಾಸಿ
ನಿಧನಕ್ಕೆ
ಅರಣ್ಯ,
ಕನ್ನಡ
ಮತ್ತು
ಸಂಸ್ಕೃತಿ
ಸಚಿವ
ಅರವಿಂದ
ಲಿಂಬಾವಳಿ
ತೀವ್ರ
ಶೋಕ
ವ್ಯಕ್ತಪಡಿಸಿದ್ದಾರೆ.
"ಸಿ.ಎಂ ಉದಾಸಿ ಉತ್ತರ ಕರ್ನಾಟಕದ ಅತ್ಯಂತ ಪ್ರಬಲ ಜನ ನಾಯಕರಾಗಿದ್ದರು. ಹಾವೇರಿ ಜಿಲ್ಲೆ, ಹಾನಗಲ್ಲಿನ ಅಣ್ಣಾ ಎಂದೇ ಪ್ರಖ್ಯಾತರಾಗಿದ್ದ ಸಿ.ಎಂ ಉದಾಸಿ, ನಾವು ಕಂಡ ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಲೋಕೋಪಯೋಗಿ ಸಚಿವರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದ ಅವರು, ಇಳಿವಯಸ್ಸಿನಲ್ಲಿಯೂ ಶಾಸಕರಾಗಿ ತಮ್ಮ ಕ್ಷೇತ್ರದ ಜನಹಿತಕ್ಕಾಗಿ ದುಡಿಯುತ್ತಿದ್ದರು. ರೈತಾಪಿ ಕುಟುಂಬದಿಂದ ಬಂದ ಅವರು ಅಂತಃಕರಣವುಳ್ಳ ವ್ಯಕ್ತಿಯಾಗಿದ್ದರು. ನನ್ನ ಜೊತೆ ಒಳ್ಳೆಯ ಸ್ನೇಹ ಹೊಂದಿದ್ದ ಅವರು ಅನೇಕ ಸಮಿತಿಗಳಲ್ಲಿ ನನ್ನೊಂದಿಗೆ ಭಾಗವಹಿಸಿ ಸಲಹೆ ಸೂಚನೆ ಕೊಡುತ್ತಿದ್ದರು" ಎಂದು ಸಂತಾಪದ ಜೊತೆಗೆ ನೆನಪನ್ನು ಸ್ಮರಿಸಿದ್ದಾರೆ.
ಮಾಜಿ
ಸಚಿವ
ಸಿ.ಎಂ
ಉದಾಸಿ
ನಿಧನಕ್ಕೆ
ಡಿಸಿಎಂ
ಶೋಕ
ಮಾಜಿ
ಸಚಿವ
ಹಾಗೂ
ಭಾರತೀಯ
ಜನತಾ
ಪಕ್ಷದ
ಹಿರಿಯ
ಶಾಸಕ
ಸಿ.ಎಂ
ಉದಾಸಿ
ನಿಧನಕ್ಕೆ
ಉಪ
ಮುಖ್ಯಮಂತ್ರಿ
ಡಾ.ಸಿ.ಎನ್
ಅಶ್ವಥ್
ನಾರಾಯಣ
ತೀವ್ರ
ಶೋಕ
ವ್ಯಕ್ತಪಡಿಸಿದ್ದಾರೆ.
ಸಿ.ಎಂ ಉದಾಸಿ ನಾಡು ಕಂಡ ಹಿರಿಯ ರಾಜಕಾರಣಿ. ಸಜ್ಜನ, ಸರಳತೆಯ ಮೂರ್ತಿ. ಕಿರಿಯ ಶಾಸಕರಿಗೆ ಮಾರ್ಗದರ್ಶಕರು ಕೂಡ ಆಗಿದ್ದರು. ಲೋಕೋಪಯೋಗಿ ಇಲಾಖೆ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಅವರು ಕಾರ್ಯನಿರ್ವಹಿಸಿದ್ದರು. ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ಅಗಲಿಕೆ ದುಃಖ ಉಂಟು ಮಾಡಿದೆ ಎಂದು ಡಿಸಿಎಂ ಹೇಳಿದ್ದಾರೆ.
ಕೃಷಿ
ಸಚಿವ
ಬಿ.ಸಿ
ಪಾಟೀಲ್
ಶೋಕ
ಸಂದೇಶ
"ಹಾವೇರಿ
ಜಿಲ್ಲೆಯ
ಹಾಗೂ
ಬಿಜೆಪಿ
ಪಕ್ಷದ
ಹಿರಿಯ
ಸರಳ
ಸಜ್ಜನಿಕೆಯ
ರಾಜಕಾರಣಿ
ಸಿ.ಎಂ
ಉದಾಸಿ
ನಿಧನ
ರಾಜ್ಯಕ್ಕೆ
ತುಂಬಲಾಗದ
ನಷ್ಟವಾಗಿದೆ.
ಹಾನಗಲ್ಲಿನಲ್ಲಿ
ಅಣ್ಣಾ
ಎಂದೇ
ಸಂಬೋಧಿಸಲ್ಪಡುತ್ತಿದ್ದ
ರೈತಾಪಿ
ಕುಟುಂಬದಿಂದ
ಬಂದಿರುವ
ಉದಾಸಿಯವರು
ಉತ್ತಮ
ರಾಜಕಾರಣಿಯಷ್ಟೇ
ಅಲ್ಲದೇ,
ಮಾರ್ಗದರ್ಶಕರೂ,
ಸ್ನೇಹಶೀಲರೂ
ಆಗಿದ್ದರು.
ಶ್ರೀಯುತರ
ನಿಧನ
ಪಕ್ಷಕ್ಕೂ
ಹಾವೇರಿ
ಜಿಲ್ಲೆ
ರಾಜ್ಯಕಾರಣಕ್ಕೂ
ತುಂಬಲಾರದ
ನಷ್ಟವನ್ನುಂಟು
ಮಾಡಿದೆ.
ಮೃತರ
ಆತ್ಮಕ್ಕೆ
ಆ
ಭಗವಂತ
ಸದ್ಗತಿ
ನೀಡಲಿ.
ಅಭಿಮಾನಿಗಳಿಗೂ
ಅವರ
ಕುಟುಂಬದ
ಸದಸ್ಯರಿಗೂ
ದುಃಖಭರಿಸುವ
ಶಕ್ತಿನೀಡಲೆಂದು
ಪ್ರಾರ್ಥಿಸುತ್ತೇನೆ''
ಎಂದು
ಕೃಷಿ
ಸಚಿವ
ಬಿ.ಸಿ
ಪಾಟೀಲ್
ತಿಳಿಸಿದ್ದಾರೆ.
Recommended Video
ಮಾಜಿ
ಸಿಎಂ
ಎಚ್.ಡಿ
ಕುಮಾರಸ್ವಾಮಿ
ಸಂತಾಪ
"ಮಾಜಿ
ಸಚಿವರು,
ಹಾನಗಲ್
ಹಾಲಿ
ಶಾಸಕರು
ಹಾಗೂ
ಜನತಾ
ಪರಿವಾರ
ಮೂಲದ
ಸಿ.ಎಂ
ಉದಾಸಿಯವರು
ಇಂದು
ನಮ್ಮನ್ನೆಲ್ಲ
ಅಗಲಿದ
ಸುದ್ದಿ
ತೀವ್ರ
ನೋವುಂಟು
ಮಾಡಿದೆ.
ಭಗವಂತ
ಅವರ
ಆತ್ಮಕ್ಕೆ
ಚಿರಶಾಂತಿ
ನೀಡಲಿ.
ಅವರ
ಕುಟುಂಬ,
ಹಾಗೂ
ಅಭಿಮಾನಿ
ವರ್ಗಕ್ಕೆ
ದುಃಖವನ್ನು
ಭರಿಸುವ
ಶಕ್ತಿ
ನೀಡಲಿ
ಎಂದು
ಪ್ರಾರ್ಥಿಸುತ್ತೇನೆ"
ಎಂದು
ಮಾಜಿ
ಸಿಎಂ
ಎಚ್.ಡಿ
ಕುಮಾರಸ್ವಾಮಿ
ಸಂತಾಪ
ವ್ಯಕ್ತಪಡಿಸಿದ್ದಾರೆ.