Breaking: ಚಿತ್ರದುರ್ಗ ಮುರುಘಮಠದ ಶಿವಮೂರ್ತಿ ಸ್ವಾಮೀಜಿ ಬಂಧನ ವದಂತಿ
ಹಾವೇರಿ, ಆಗಸ್ಟ್ 29: ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿರುವ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಮಠದ ಕಡೆಯಿಂದ ಸ್ಪಷ್ಟೀಕರಣವೊಂದು ಹೊರ ಬಿದ್ದಿದ್ದು, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ.
ಈ ನಡುವೆ ಪ್ರಕರಣದ ಬಗ್ಗೆ ಚಿತ್ರದುರ್ಗ ಜಿಲ್ಲಾ ಪೊಲೀಸರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
ನಡೆದಿದ್ದೇನು?:
ಸೋಮವಾರ ಮುರುಘಮಠದ ಶಿವಮೂರ್ತಿ ಸ್ವಾಮೀಜಿಯವರು ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾಗ ಬಂಧನಕ್ಕೆ ಒಳಗಾದರು ಎಂದು ಮೊದಲು ಮಾಧ್ಯಮಗಳು ವರದಿ ಮಾಡಿದ್ದವು. ಪೊಲೀಸರು ಹಾವೇರಿ ಜಿಲ್ಲೆ ಬಂಕಾಪುರದ ಬಳಿ ಸ್ವಾಮಿಯನ್ನು ವಶಕ್ಕೆ ಪಡೆದಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಈ ಕುರಿತು ಹಾವೇರಿ ಜಿಲ್ಲಾ ವರಿಷ್ಧಾಧಿಕಾರಿ ಸ್ಪಷ್ಟೀಕರಣ ನೀಡಿದ್ದು, ಯಾವುದೇ ಹೈಪ್ರೊಫೈಲ್ ಬಂಧನ ನಡೆಸಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಅಪ್ರಾಪ್ತ
ವಿದ್ಯಾರ್ಥಿನಿಯರ
ಮೇಲೆ
ಲೈಂಗಿಕ
ದೌರ್ಜನ್ಯ:
ಚಿತ್ರದುರ್ಗದ
ಶ್ರೀಮಠದ
ಆಡಳಿತ
ವ್ಯಾಪ್ತಿಗೆ
ಬರುವ
ವಸತಿನಿಲಯದಲ್ಲಿ
ಇರುವ
ವಿದ್ಯಾರ್ಥಿನಿಯರ
ಮೇಲೆ
ಶಿವಮೂರ್ತಿ
ಶರಣರು
ಲೈಂಗಿಕ
ದೌರ್ಜನ್ಯ
ಎಸಗುತ್ತಿದ್ದರು
ಎಂದು
ಆರೋಪಿಸಲಾಗಿದೆ.
ಮುರುಘಾಮಠ
ಶಿವಮೂರ್ತಿ
ಶರಣರ
ವಿರುದ್ದ
ಪೋಕ್ಸೋ
ಕಾಯ್ದೆಯಡಿ
ಮೈಸೂರಿನ
ನಜರಾಬಾದ್
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿತ್ತು.
ಅಕ್ಕಮಹಾದೇವಿ
ವಸತಿ
ನಿಲಯದ
ಅಪ್ರಾಪ್ತ
ವಿದ್ಯಾರ್ಥಿನಿಯರಿಗೆ
ಲೈಂಗಿಕ
ಕಿರುಕುಳ
ನೀಡಿರುವ
ಆರೋಪದ
ಮೇಲೆ
ಎಫ್ಐಆರ್
ಹಾಕಲಾಗಿತ್ತು.
ಚಂದ್ರಶೇಖರ್
ಎಂಬುವವರು
ದೂರನ್ನು
ನೀಡಿದ್ದಾರೆ.
ಚಿತ್ರದುರ್ಗ ಮುರುಘಾಮಠದ ಅಧೀನದ ವಸತಿ ನಿಲಯ:
ಕಳೆದ
26.08.22
ರಂದು
ಚಂದ್ರ
ಕುಮಾರ್
ಜಿಲ್ಲಾ
ಮಕ್ಕಳ
ಕಲ್ಯಾಣ
ಘಟಕ
ಮೈಸೂರು
ಜಿಲ್ಲೆ
ಕಾನೂನು
ಮತ್ತು
ಪರಿವೀಕ್ಷಣಾಧಿಕಾರಿಯಾಗಿದ್ದು
ಒಡನಾಡಿ
ಸಂಸ್ಥೆಯವರು
ಅಪ್ರಾಪ್ತ
ಬಾಲಕಿಯರು
ಅಕ್ಕಮಹಾದೇವಿ
ವಸತಿ
ನಿಲಯದ
ನಿವಾಸಿಗಳಾಗಿರುತ್ತಾರೆ.
ಈ
ವಸತಿ
ನಿಲಯವು
ಚಿತ್ರದುರ್ಗ
ಮುರುಘಾಮಠದ
ಅಧೀನದಲ್ಲಿರುತ್ತದೆ.
ಈ
ಸಂಸ್ಥೆಯ
ಮುಖ್ಯಸ್ಥರಾದ
ಮಠದ
ಸ್ವಾಜೀಜಿಗಳಾದ
ಶಿವಮೂರ್ತಿ
ಮುರುಘ
ಶರಣರು
ಇಬ್ಬರು
ಅಪ್ರಾಪ್ತ
ಬಾಲಕಿಯರಿಗೆ
ಮೂರುವರೆ
ವರ್ಷಗಳಿಂದ
ಲೈಂಗಿಕ
ದೌರ್ಜನ್ಯ
ನೀಡುತ್ತಿದ್ದಾರೆ.
ಇವರಿಗೆ
ವಾರ್ಡನ್
ರಶ್ಮಿ,
ಮಠದ
ಮರಿಸ್ವಾಮಿಗಳಾದ
ಬಸವಾದಿತ್ಯ
,
ಲಾಯರ್
ಗಂಗಾಧರಯ್ಯ,
ಲೀಡರ್
ಪರಮ
ಶಿವಯ್ಯ
ಸಹಾಯ
ಮಾಡಿರುತ್ತಾರೆ
ಎಂದು
ಮಕ್ಕಳ
ಕಲ್ಯಾಣ
ಸಮಿತಿ
ಮುಂದೆ
ಹಾಜರು
ಪಡಿಸಿರುತ್ತಾರೆ.
ಈ
ಮಕ್ಕಳ
ಹೇಳಿಕೆಯನ್ನು
ಪಡೆದಿರುವ
ವೇಳೆ
ಲೈಂಗಿಕ
ದೌರ್ಜನ್ಯ
ನೀಡಿರುವುದು
ತಿಳಿದು
ಬಂದಿರುತ್ತದೆ.
ಆರೋಪಿಗಳ
ವಿರುದ್ದ
ಸೂಕ್ತ
ಕಾನೂನು
ಕ್ರಮ
ಕೈಗೊಳ್ಳಲು
ಮನವಿಯನ್ನು
ಮಾಡಿದ್ದು
ಮಕ್ಕಳಿಗೆ
ತಾತ್ಕಾಲಿಕವಾಗಿ
ಒಡನಾಡಿ
ಸಂಸ್ಥೆಯಲ್ಲಿ
ವಸತಿಯನ್ನು
ಕಲ್ಪಿಸಲಾಗಿದೆ
ಎಂದು
ದೂರಿನಲ್ಲಿ
ಉಲ್ಲೇಖಿಸಲಾಗಿದೆ.
ಪೋಕ್ಸೋ
ಪ್ರಕರಣದ
ಹಿನ್ನೆಲೆ:
ಮುರುಘಾ
ಮಠದ
ಡಾ.
ಶಿವಮೂರ್ತಿ
ಸ್ವಾಮೀಜಿ
ವಿರುದ್ಧ
ಲೈಂಗಿಕ
ದೌರ್ಜನ್ಯ
ಆರೋಪ
ಹೊರಸಿರುವ
ಪ್ರಕರಣ
ಚಿತ್ರದುರ್ಗ
ಗ್ರಾಮಾಂತರ
ಠಾಣೆಗೆ
ವರ್ಗಾಯಿಸಿದ
ಬೆನ್ನಲ್ಲೇ
ಇಬ್ಬರು
ಬಾಲಕಿಯರನ್ನು
ಮೈಸೂರಿನಿಂದ
ಚಿತ್ರದುರ್ಗಕ್ಕೆ
ಕರೆದೊಯ್ಯಲಾಗಿತ್ತು.
ಚಿತ್ರದುರ್ಗ
ಜಿಲ್ಲಾ
ಮಕ್ಕಳ
ಕಲ್ಯಾಣ
ಸಮಿತಿಗೆ
ಇಬ್ಬರು
ಶಾಲಾ
ಬಾಲಕಿಯರನ್ನು
ಒಪ್ಪಿಸಲಾಗಿತ್ತು.
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣ ಸ್ವಾಮೀಜಿ ಸೇರಿದಂತೆ ಹಲವರ ವಿರುದ್ಧ ಬಾಲಕಿಯರು ನೀಡಿರುವ ಹೇಳಿಕೆ ಅನ್ನು ಆಧರಿಸಿ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿದ ಬೆನ್ನಲ್ಲೇ ಎಫ್ಐಆರ್ ಅನ್ನು ದಾಖಲಿಸಲಾಗಿತ್ತು.
ಡಾ. ಶಿವಮೂರ್ತಿ ಮುರುಘಾ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಎಸಗಿ ದೂರು ನೀಡಿರುವ ಶಾಲಾ ಬಾಲಕಿಯರ ಆಪ್ತರು ಒಳಗೊಂಡಂತೆ ಮಠದ ಹಲವು ವಿದ್ಯಾರ್ಥಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇಬ್ಬರ ಶಾಲಾ ಬಾಲಕಿಯರು ಡಾ. ಶಿವಮೂರ್ತಿ ಮುರುಘಾ ಶರಣರು ನೀಡಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪ್ರಭಾವಿಗಳು ಒಡನಾಡಿ ಸ್ವಯಂ ಸೇವಾ ಸಂಸ್ಥೆಗೆ ಒತ್ತಡ ಹಾಕಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಪರುಶುರಾಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.