ಅನರ್ಹರಿಗೆ ಮತ ಕೇಳುವ ಅರ್ಹತೆ ಇಲ್ಲ: ರಮೇಶ್ ಕುಮಾರ್
ಹಾವೇರಿ, ನವೆಂಬರ್ 19: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ, ಅವರು ಮತ ಕೇಳುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ರಾಣೇಬೆನ್ನೂರಿನ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
17 ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ಉಳಿದುಕೊಂಡಾಗ ತನಗೂ, ಅತೃಪ್ತ ಶಾಸಕರಿಗೂ ಸಂಬಂಧವಿಲ್ಲ ಎನ್ನುತ್ತಿದ್ದ ಯಡಿಯೂರಪ್ಪ ಈಗ ಅದೇ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಅವರುಗಳನ್ನು ಮಂತ್ರಿ ಮಾಡುವುದಾಗಿ ಹೇಳಿಕೊಂಡಿರುವ ಅವರಿಗೂ ಮತ್ತು ಅಭ್ಯರ್ಥಿಗಳಿಗೂ ಜನರೇ ತೀರ್ಪು ಕೊಡುತ್ತಾರೆ ಎಂದರು.
ನಾನು ಸ್ಪೀಕರ್ ಆಗಿದ್ದಾಗ ಅನರ್ಹಗೊಳಿಸಿದ್ದ ನನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನೀವು ಅನರ್ಹರನ್ನು ದೂರವಿಡಿ ಎಂದು ಮನವಿ ಮಾಡಿದರು.
ನಾಮಪತ್ರ
ಭರಾಟೆ
ರಾಣೇಬೆನ್ನೂರು
ವಿಧಾನಸಭಾ
ಕ್ಷೇತ್ರದ
ಉಪ
ಚುನಾವಣೆಯ
ನಾಮಪತ್ರ
ಸಲ್ಲಿಕೆಗೆ
ಅಂತಿಮ
ದಿನವಾದ
ಸೋಮವಾರ
ಒಟ್ಟು
21
ನಾಮಪತ್ರ
ಸಲ್ಲಿಕೆಯಾಗಿವೆ.
ನಿನ್ನೆ
ಒಂದೇ
ದಿನ
11
ನಾಮಪತ್ರಗಳು
ಸಲ್ಲಿಕೆಯಾಗಿವೆ.
ಕಾಂಗ್ರೆಸ್
ನಿಂದ
ಕೆ.ಬಿ.
ಕೋಳಿವಾಡ,
ಬಿಜೆಪಿಯ
ಅರುಣ್
ಕುಮಾರ್
ಪೂಜಾರ್
,
ಜೆಡಿಎಸ್
ನ
ಮಲ್ಲಿಕಾರ್ಜುನ
ಹಲಗೇರಿ,
ಕೆಜೆಪಿಯ
ನಾಗಪ್ಪ
ಸಂಶಿ
ಆಕಾಂಕ್ಷಿಗಳಾಗಿದ್ದಾರೆ.
ಇನ್ನು ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಬಿ.ಸಿ.ಪಾಟೀಲ್, ಕಾಂಗ್ರೆಸ್ ನಿಂದ ಬಿ.ಹೆಚ್.ಬನ್ನಿಕೋಡ್, ಜೆಡಿಎಸ್ ನಿಂದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿ ಒಟ್ಟು 18 ಅಭ್ಯರ್ಥಿಗಳು ಉಪ ಚುನಾವಣಾ ಕಣದಲ್ಲಿದ್ದಾರೆ.