ಅನ್ನ ಭಾಗ್ಯ ಯೋಜನೆಯಲ್ಲಿ ಗೋಲ್ ಮಾಲ್: ಅಕ್ರಮ ಬಯಲಿಗೆಳೆದ ಕರವೇ
ಹಾವೇರಿ, ಡಿಸೆಂಬರ್ 21 : ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ನೀಡುತಿದ್ದ ಪಡಿತರ ಅಕ್ಕಿಯಲ್ಲಿ ಗೋಲ್ ಮಾಲ್ ನಡೆದಿದೆ, ತೂಕ ಕಡಿಮೆ ನೀಡಿ ಬಡವರಿಗೆ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೆಕೆರೂರು ತಾಲೂಕಿನ ರಟ್ಟಿಹಳ್ಳಿಯಲ್ಲಿ ಘಟನೆ ನಡೆದಿದ್ದು, ಪರಶುರಾಮ ಮತ್ತು ಮಾಲತೇಶ ಎಂಬ ಪಡಿತರ ಅಕ್ಕಿ ವಿತರಕರಿಂದ ವಂಚನೆ ನಡೆದಿದೆ. ವಿತರಕರು ಪ್ರತಿ ಕುಟುಂಬಕ್ಕೆ ಒಂದೂವರೆ ಕೆಜಿಯಿಂದ ೨ಕೆಜಿ ಕಡಿಮೆ ಅಕ್ಕಿಯನ್ನು ನೀಡುತ್ತಿದ್ದರು.
ಈ ಅಕ್ರಮವನ್ನು ಬಯಲು ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿತರಕರ ಪರವಾನಗಿ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ತಾಲೂಕು ಆಹಾರ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Comments
English summary
Karnataka Rakshana vedike members staged dharna in Rattihalli town of Haveri district alleging that fair price shop owner cheating beneficiaries in distribution of rice in Anna Bhagya Scheme
Story first published: Thursday, December 21, 2017, 17:58 [IST]