ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

By ಹಾವೇರಿ ಪ್ರತಿನಿಧಿ
|
Google Oneindia Kannada News

Recommended Video

ಕೋಡಿ ಮಠದ ಸ್ವಾಮೀಜಿ ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ. | Kodimutt Swamiji | Oneindia Kannada

ಹಾವೇರಿ‌, ಸೆಪ್ಟೆಂಬರ್ 19: "ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯವಿಲ್ಲ" ಎಂದು ಭವಿಷ್ಯ ನುಡಿದಿದ್ದ ಕೋಡಿಮಠ ಸ್ವಾಮೀಜಿ, ಈಗ ಮತ್ತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿ ಮಾತನಾಡಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, "ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತ" ಎಂದು ಹೇಳಿದ್ದಾರೆ.

"ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. 18 ತಿಂಗಳ ನಂತರ ಮತ ಭಿಕ್ಷೆ ಎಂದು (ಚುನಾವಣೆ). ಇದನ್ನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ" ಎಂದು ಒಗಟಾಗಿ ಹೇಳಿದ್ದಾರೆ.

'ಗಗನಕ್ಕೆ ಮುತ್ತಿಕ್ಕೀತು, ಮುತ್ತು ಎರಡಾಯಿತಲೇ ಎಚ್ಚರ': ಕಾರ್ಣಿಕ'ಗಗನಕ್ಕೆ ಮುತ್ತಿಕ್ಕೀತು, ಮುತ್ತು ಎರಡಾಯಿತಲೇ ಎಚ್ಚರ': ಕಾರ್ಣಿಕ

"ಬೆಳೆ ಒಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳ್ತಾರೆ ಎಂದಿದ್ದೆ" ಎಂದು ಹೇಳುತ್ತಲೇ ಬಿಎಸ್ ವೈ ಸರ್ಕಾರ ಪತನದ ಮುನ್ಸೂಚನೆ ನೀಡಿದ್ದಾರೆ. ಕಾರ್ತಿಕ ಕಳೆಯುವವರೆಗೂ ಈ ಲಕ್ಷಣ ಇದೆ ಎಂದು ತಿಳಿಸಿದ್ದಾರೆ.

 ಮೂರು ತಿಂಗಳು ಜಲಕಂಟಕದ ಎಚ್ಚರಿಕೆ

ಮೂರು ತಿಂಗಳು ಜಲಕಂಟಕದ ಎಚ್ಚರಿಕೆ

ಇದೇ ಆಗಸ್ಟ್ ನಲ್ಲಿ ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇಡೀ ಜಗತ್ತು ಬೆಚ್ಚಿಬೀಳುವ ಆಘಾತವೊಂದು ಕಾದಿದೆ ಎಂದು ಹೇಳಿದ್ದರು. ಇದರಿಂದ ಭಾರೀ ನಷ್ಟವಾಗುವ ಸೂಚನೆಯನ್ನೂ ಕೊಟ್ಟು ಭವಿಷ್ಯ ನುಡಿದಿದ್ದರು. ಅದರಂತೆ ಈ ತಿಂಗಳಲ್ಲಿ ಭೀಕರ ಪ್ರವಾಹ ಎದುರಾಯಿತು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಹಲವೆಡೆ ಅತಿವೃಷ್ಟಿಯಾಯಿತು. ಮಳೆಯಾಗಿ ಹೆಚ್ಚಿನ ಮಟ್ಟದಲ್ಲಿ ನಷ್ಟವನ್ನು ತಂದವು. ದೇಶಕ್ಕೆ ಮೂರು ತಿಂಗಳವರೆಗೂ ಜಲಕಂಟಕ ಇದೆ ಎಂದು ಸ್ವಾಮೀಜಿ ನುಡಿದಿದ್ದರು.

ಹೇಳಿದ್ದಂತೇ ಉರುಳಿತು ಸರ್ಕಾರ

ಹೇಳಿದ್ದಂತೇ ಉರುಳಿತು ಸರ್ಕಾರ

ಹೀಗೆ ಒಂದೂವರೆ ವರ್ಷದ ಹಿಂದೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕುರಿತು ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಈ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯ ಇಲ್ಲ ಎಂದು ಹೇಳಿದ್ದರು. ಅದರಂತೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡಿತು.

ಇನ್ನೂ ಭೀಕರ ಗಂಡಾಂತರ ಕಾದಿದೆ: ಕೋಡಿಮಠದ ಶ್ರೀ ಭವಿಷ್ಯಇನ್ನೂ ಭೀಕರ ಗಂಡಾಂತರ ಕಾದಿದೆ: ಕೋಡಿಮಠದ ಶ್ರೀ ಭವಿಷ್ಯ

ಬೆಳಗಾವಿಯಲ್ಲಿ ನುಡಿದಂತೆ ನಡೆಯಿತು

ಬೆಳಗಾವಿಯಲ್ಲಿ ನುಡಿದಂತೆ ನಡೆಯಿತು

ಕಳೆದ ವರ್ಷ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಭೀಕರ ಬರಗಾಲದಿಂದ ಹಲವು ಜಿಲ್ಲೆಗಳು ತತ್ತರಿಸಿದ್ದವು. ಆದರೆ ಆ ಸಮಯದಲ್ಲಿ ಚಿಂತಿಸುವ ಅಗತ್ಯವಿಲ್ಲ, ಒಂದು ವರ್ಷದಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಬೆಳಗಾವಿಯಲ್ಲಿ ಭರವಸೆ ನೀಡಿದ್ದರು ಸ್ವಾಮೀಜಿ. ಕಳೆದ ಏಪ್ರಿಲ್ ನಲ್ಲಿ ಅವರು ಈ ಭವಿಷ್ಯ ನುಡಿದಿದ್ದು, ಇದೀಗ ಬೆಳಗಾವಿ ಅತಿವೃಷ್ಟಿಯಿಂದಾಗಿ ತತ್ತರಿಸಿದೆ. ಅವರು ಹೇಳಿದಂತೆ ಎಲ್ಲ ಕಡೆ ನೀರು ಹರಿದಾಡಿದೆ.

ಮತ್ತೆ ಮೋದಿ ಅಧಿಕಾರಕ್ಕೆ

ಮತ್ತೆ ಮೋದಿ ಅಧಿಕಾರಕ್ಕೆ

ಇದೇ ವರ್ಷದ ಮಾರ್ಚ್ ನಲ್ಲಿ ಯಾದಗಿರಿಯಲ್ಲಿ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಕೋಡಿಶ್ರೀಗಳು, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎಂದು ಭವಿಷ್ಯ ನುಡಿದಿದ್ದರು. ಈ ಮೂಲಕ ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗುವ ಸೂಚನೆಯನ್ನೂ ಸ್ವಾಮೀಜಿ ನೀಡಿದ್ದಾರೆ ಎಂದು ಭಾವಿಸಲಾಗಿತ್ತು.

English summary
Kodimutt Swamijis, who predicted that the coaltion government would not last long, again predicted about the overnment. He gave hint of interim election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X