ಬಿಜೆಪಿ ಆಫರ್ ಗಿಂತ ಡಬಲ್ ಕೊಡುತ್ತೇನೆ: ಎಚ್ಡಿಕೆ ವಿರುದ್ದ 'ಕೌರವ' ಹೊಸ ಬಾಂಬ್
Recommended Video
ಹಾವೇರಿ, ಸೆ 26: " ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ಜಿಲ್ಲೆಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದರಿಂದ ಕುಮಾರಸ್ವಾಮಿ ಸಿಎಂ ಪದವಿಯನ್ನು ಕಳೆದುಕೊಂಡರು" ಎಂದು ಹಿರೇಕೇರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.
" ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಎರಡೆರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಯಾರಿಗಾದರೂ ಧನ್ಯವಾದ ಅವರು ಹೇಳಿದ್ದಾರಾ" ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ಯಾರೂ ನನ್ನ ರೀತಿ ಸಾಲಮನ್ನಾ ಮಾಡಿಲ್ಲ: ಕುಮಾರಸ್ವಾಮಿ
" ನನ್ನ ಮಗಳಿಗೂ ಕುಮಾರಸ್ವಾಮಿ ಫೋನ್ ಮಾಡಿದ್ದರು. ಬಿಜೆಪಿಯವರು ಎಷ್ಟು ಕೊಡುತ್ತಾರೆ. ಅದರ ಡಬಲ್ ಕೊಡುತ್ತೇನೆ ಎನ್ನುವ ಆಫರ್ ಅನ್ನು ನೀಡಿದ್ದರು" ಎಂದು ಬಿ.ಸಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
" ಕುಮಾರಸ್ವಾಮಿಯವರ ಯಾವುದೇ ಆಫರ್ ಗೆ ನಾವು ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೋ, ಅಂತಹ ಜಾಗದಲ್ಲಿ ನಾವಿರುವುದಿಲ್ಲ" ಎಂದು ಬಿ.ಸಿ.ಪಾಟೀಲ್ ಹೇಳಿದರು.
" ಮಾತೆತ್ತಿದ್ದರೆ ಬ್ರದರ್ ಎನ್ನುತ್ತಾರೆ. ಮೂರು ಬಾರಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡುವುದಾಗಿ ಕೈಯೆತ್ತಿದ್ದರು. ಅವರಂತಹ ವಿಶ್ವಾಸದ್ರೋಹಿ ಇನ್ನೊಬ್ಬರಿಲ್ಲ" ಎಂದು ಪಾಟೀಲರು ಬೇಸರ ವ್ಯಕ್ತಪಡಿಸಿದರು.
ಸಂಸಾರಶರಧಿಯ ದಾಂಟಿಸಿ... ಕುಮಾರಸ್ವಾಮಿ ಟ್ವೀಟಿನ ಅರ್ಥ ಹುಡುಕುತ್ತ..!
" ನಾನೇನು ಸಚಿವಸ್ಥಾನದ ಹಿಂದೆ ಬಿದ್ದಿರಲಿಲ್ಲ. ಕ್ಷೇತ್ರಕ್ಕೆ ಅನುದಾನವನ್ನೂ ನೀಡದಿದ್ದಾಗ, ಹೊರನಡೆಯುವ ನಿರ್ಧಾರಕ್ಕೆ ಬಂದೆ" ಎಂದು ಬಿ.ಸಿ.ಪಾಟೀಲ್, ಕಾರ್ಯಕರ್ತರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.