ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಆಫರ್ ಗಿಂತ ಡಬಲ್ ಕೊಡುತ್ತೇನೆ: ಎಚ್ಡಿಕೆ ವಿರುದ್ದ 'ಕೌರವ' ಹೊಸ ಬಾಂಬ್

|
Google Oneindia Kannada News

Recommended Video

ಬಿಜೆಪಿ ಕೊಡೋದಕ್ಕಿಂತ ಡಬಲ್ ಆಫರ್ ಕೊಡ್ತಿನಿ ಎಂದ ಕುಮಾರಣ್ಣ..? | Oneindia Kannada

ಹಾವೇರಿ, ಸೆ 26: " ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ಜಿಲ್ಲೆಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದರಿಂದ ಕುಮಾರಸ್ವಾಮಿ ಸಿಎಂ ಪದವಿಯನ್ನು ಕಳೆದುಕೊಂಡರು" ಎಂದು ಹಿರೇಕೇರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

" ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಎರಡೆರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಯಾರಿಗಾದರೂ ಧನ್ಯವಾದ ಅವರು ಹೇಳಿದ್ದಾರಾ" ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ಯಾರೂ ನನ್ನ ರೀತಿ ಸಾಲಮನ್ನಾ ಮಾಡಿಲ್ಲ: ಕುಮಾರಸ್ವಾಮಿಇತಿಹಾಸದಲ್ಲಿ ಯಾರೂ ನನ್ನ ರೀತಿ ಸಾಲಮನ್ನಾ ಮಾಡಿಲ್ಲ: ಕುಮಾರಸ್ವಾಮಿ

" ನನ್ನ ಮಗಳಿಗೂ ಕುಮಾರಸ್ವಾಮಿ ಫೋನ್ ಮಾಡಿದ್ದರು. ಬಿಜೆಪಿಯವರು ಎಷ್ಟು ಕೊಡುತ್ತಾರೆ. ಅದರ ಡಬಲ್ ಕೊಡುತ್ತೇನೆ ಎನ್ನುವ ಆಫರ್ ಅನ್ನು ನೀಡಿದ್ದರು" ಎಂದು ಬಿ.ಸಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

Former CM HD Kumaraswamy Offered Double, Whatever BJP Offered: B C Patil

" ಕುಮಾರಸ್ವಾಮಿಯವರ ಯಾವುದೇ ಆಫರ್ ಗೆ ನಾವು ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೋ, ಅಂತಹ ಜಾಗದಲ್ಲಿ ನಾವಿರುವುದಿಲ್ಲ" ಎಂದು ಬಿ.ಸಿ.ಪಾಟೀಲ್ ಹೇಳಿದರು.

" ಮಾತೆತ್ತಿದ್ದರೆ ಬ್ರದರ್ ಎನ್ನುತ್ತಾರೆ. ಮೂರು ಬಾರಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡುವುದಾಗಿ ಕೈಯೆತ್ತಿದ್ದರು. ಅವರಂತಹ ವಿಶ್ವಾಸದ್ರೋಹಿ ಇನ್ನೊಬ್ಬರಿಲ್ಲ" ಎಂದು ಪಾಟೀಲರು ಬೇಸರ ವ್ಯಕ್ತಪಡಿಸಿದರು.

ಸಂಸಾರಶರಧಿಯ ದಾಂಟಿಸಿ... ಕುಮಾರಸ್ವಾಮಿ ಟ್ವೀಟಿನ ಅರ್ಥ ಹುಡುಕುತ್ತ..!ಸಂಸಾರಶರಧಿಯ ದಾಂಟಿಸಿ... ಕುಮಾರಸ್ವಾಮಿ ಟ್ವೀಟಿನ ಅರ್ಥ ಹುಡುಕುತ್ತ..!

" ನಾನೇನು ಸಚಿವಸ್ಥಾನದ ಹಿಂದೆ ಬಿದ್ದಿರಲಿಲ್ಲ. ಕ್ಷೇತ್ರಕ್ಕೆ ಅನುದಾನವನ್ನೂ ನೀಡದಿದ್ದಾಗ, ಹೊರನಡೆಯುವ ನಿರ್ಧಾರಕ್ಕೆ ಬಂದೆ" ಎಂದು ಬಿ.ಸಿ.ಪಾಟೀಲ್, ಕಾರ್ಯಕರ್ತರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

English summary
Former Chief Minister H D Kumaraswamy Offered Double, Whatever the BJP Offer: Hirekerur Dissident MLA B C Patil Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X