ಶಿಗ್ಗಾವಿಯ ಸಾರ್ವಜನಿಕ ಆಸ್ಪತ್ರೆಯನ್ನು ಮೆಲ್ದರ್ಜೆಗೇರಿಸಲು ನಿರ್ಧಾರ: ಸಿಎಂ ಭರವಸೆ
ಹಾವೇರಿ, ಡಿಸೆಂಬರ್, 04: ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಭಾಗವಾರು 14 ಜನ ವೈದ್ಯರಿದ್ದು, ಜನಸಂಖ್ಯೆ ಹೆಚ್ಚಾಗಿರುವ ಕಾರಣ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಹಾವೆರಿ ಜಿಲ್ಲೆಯಲ್ಲಿ ಪ್ರವಾಸ ಕೈಂಡಿರುವ ಬಸವರಾಜ ಬೊಮ್ಮಯಿ ಅವರು ಶಿಗ್ಗಾವಿಗೆ ಭೇಟಿ ನೀಡಿದ್ದರು. ಹಾಗೆಯೇ ಶಿಗ್ಗಾವಿಯಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 250 ಹಾಸಿಗಗಳವರೆಗೂ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಐಸಿಯು, ಎನ್ಐಸಿಯು ಬೆಡ್ಗಳು ಮತ್ತು ಆಪರೇಷನ್ ಥಿಯೇಟರ್, ಡಯಾಲಿಸಿಸ್ ಯುನಿಟ್ ವ್ಯವಸ್ಥೆಯೂ ಇರಲಿದೆ. ಜಿಲ್ಲಾಸ್ಪತ್ರೆಯ ಸರಿಸಮವಾಗಿ ಇಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಸಿಎಂ ಬಸವರಾಜ ಬೊಮ್ಮಾಯಿ
ಪಿಹೆಚ್ಸಿಗಳ ಮೇಲ್ದರ್ಜೆಗೆ ನಿರ್ಧಾರ ಹೃದ್ರೋಗ ಹಾಗೂ ಮೂತ್ರಪಿಂಡ ಕಾಯಿಲೆಗಳನ್ನು ಹೊರತುಪಡಿಸಿ ಎಲ್ಲಾ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ನೀಡುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ರಾಜ್ಯದಲ್ಲಿ 100 ಪಿ.ಹೆಚ್.ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. 60 ಕ್ಕಿಂತ ಹೆಚ್ಚು ಹೊಸ ಪಿ.ಹೆಚ್.ಸಿಗಳನ್ನು ಪ್ರಾರಂಭಿಸಲಾಗುತ್ತಿದೆ. ಜೊತೆಗೆ ಡಿಸೆಂಬರ್ಲ್ಲಿ ರಾಜ್ಯಾದ್ಯಂತ 437 ನಮ್ಮ ಕ್ಲಿನಿಕ್ಗಳನ್ನು ಪ್ರಾರಂಭ ಮಾಡುತ್ತೇವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ನಮ್ಮ ಕ್ಲೀನಿಕ್ಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಇನ್ಸ್ಟಿಟ್ಯೂಷನ್
ಆರಂಭಕ್ಕೆ
ತಗಲುವ
ವೆಚ್ಚ
ಜನರ
ಸಮಸ್ಯೆ
ಅರ್ಥ
ಮಾಡಿಕೊಂಡು
ನಮ್ಮ
ಸರ್ಕಾರ
ಕೆಲಸ
ಮಾಡುತ್ತಿದೆ.
ಹಾಗಾಗಿ
1
ಕೋಟಿಗಿಂತ
ಹೆಚ್ಚು
ಆಯುಷ್ಮಾನ್
ಕಾರ್ಡ್
ವಿತರಣೆ
ಮಾಡಿದ್ದೇವೆ.
ಹುಬ್ಬಳ್ಳಿಯಲ್ಲಿ
360
ಕೋಟಿ
ರೂಪಾಯಿ
ವೆಚ್ಚದಲ್ಲಿ
ಜಯದೇವ
ಇನ್ಸ್ಟಿಟ್ಯೂಷನ್
ಪ್ರಾರಂಭ
ಮಾಡಲಿದ್ದೇವೆ.
ಇನ್ನು
ಹಾವೇರಿಯಲ್ಲಿ
ಮೆಡಿಕಲ್
ಕಾಲೇಜು
ಅತಿ
ವೇಗವಾಗಿ
ನಿರ್ಮಾಣ
ಆಗಿದ್ದು,
ಈ
ವರ್ಷವೇ
ಅಡ್ಮಿಷನ್
ಕೂಡ
ಪ್ರಾರಂಭವಾಗಿದೆ.
ಫೆಬ್ರವರಿ
ಅಥವಾ
ಮಾರ್ಚ್
ಒಳಗಡೆ
ಹೊಸ
ಕಟ್ಟಡದಲ್ಲಿ
ಮೆಡಿಕಲ್
ಕಾಲೇಜು
ಆರಂಭವಾಗಲಿದೆ.
ಅಲ್ಲಿಯೂ
ಕೂಡ
ಹೊಸ
ಆಸ್ಪತ್ರೆ
ನಿರ್ಮಾಣ
ಆಗಲಿದೆ
ಎಂದು
ಸಿಎಂ
ಬಸವರಾಜ
ಬೊಮ್ಮಾಯಿ
ತಿಳಿಸಿದರು.